ಮಹಾರಾಷ್ಟ್ರ: ಬಿಜೆಪಿ ಮತ್ತು ಅಜಿತ್ ಪವಾರ್ ಸೇರಿ ನಡೆಸಿರುವ ನಾಟಕೀಯ ಬೆಳವಣಿಗೆಗೆ ಮತ್ತು ಎನ್.ಸಿ.ಪಿಗೆ ಯಾವುದೇ ಸಂಬಂಧವಿಲ್ಲ. ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರ. ಎನ್.ಸಿ.ಪಿ ಬಿಜೆಪಿಯನ್ನು ಬೆಂಬಲಿಸಿಲ್ಲವೆಂದು ಶರದ್ ಪವಾರ್ ತಿಳಿಸಿದ್ದಾರೆ.

ಇಂದು ಮುಂಜಾನೆ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಈತನ್ಮಧ್ಯೆ ಶಿವಸೇನೆ ಕೂಡ ಇದು ಎನ್.ಸಿ.ಪಿ ನಿರ್ಧಾರವಲ್ಲವೆಂದು ಸ್ಪಷ್ಟಪಡಿಸಿದೆ. ಇದು ಜನರ ಬೆನ್ನಿಗೆ ಇರಿಯುವ ಪ್ರಯತ್ನವಾಗಿದೆ ಎಂದು ಬಿಜೆಪಿಯ ನಡೆಯ ಬಗ್ಗೆ ಕಟುವಾಗಿ ಟೀಕಿಸಿದೆ.

ಒಂದು ವೇಳೆ ಎನ್.ಸಿ.ಪಿಯ ನಿರ್ಧಾರ ಅಲ್ಲವೆಂದಾದರೆ ಮತ್ತೆ ಬಿಜೆಪಿ ಸಂಕಷ್ಟಕ್ಕೀಡಾಗಲಿದೆ.

Leave a Reply