ಆಧುನಿಕ ಜೀವನಶೈಲಿಯಲ್ಲಿ, ಮಣ್ಣಿನ ಪಾತ್ರೆಗಳು ನಿಧಾನವಾಗಿ ಮರೆಯಾದವು. ಆದರೆ ಕಳೆದ ಕೆಲವು ವರ್ಷಗಳಿಂದ, ಮಣ್ಣು ಮೆಟ್ರೊ ನಗರಗಳಲ್ಲಿ ಮತ್ತು ಸಣ್ಣ ನಗರ ಮನೆಗಳಲ್ಲಿ ಮಣ್ಣಿನ ಪಾತ್ರೆಗಳು ಕಂಡುಬಂದಿವೆ.

ಮಣ್ಣಿನ ಪಾತ್ರೆಯಲ್ಲಿ ಊಟವನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಹಿಂದಿನ ಕಾಲದವರು ಹೇಳುತ್ತಾರೆ. ಆಹಾರವನ್ನು ನಿಧಾನವಾಗಿ ಬೆಂಕಿಯಿಂದ ಬೇಯಿಸಬೇಕೆಂದು ಆಯುರ್ವೇದ ಹೇಳಿದೆ. ಆದರೆ ಇದು ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಸಾಧ್ಯವಿಲ್ಲ. ಅವುಗಳಲ್ಲಿ ಆಹಾರವನ್ನು ವೇಗವಾಗಿ ತಯಾರಿಸಲಾಗುತ್ತದೆ. ಮಡಕೆ ಆಹಾರವನ್ನು ಬೆಂಕಿ ಜ್ವಾಲೆಯ(ಸೌದೆ ಒಲೆ) ಮೇಲೆ ತಯಾರಿಸಲಾಗುತ್ತದೆ. ಇದರ ಆಹಾರ ರುಚಿಕರವಾಗಿರುವುದು ಮಾತ್ರವಲ್ಲ ಮತ್ತು ಪೌಷ್ಟಿಕಾಂಶವನ್ನು ನೀಡುತ್ತದೆ.

ಗ್ಯಾಸ್ ಪರಿಹಾರ(away from gastric)
ದಿನವಿಡೀ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಅಸಿಡಿಟಿ(ಗ್ಯಾಸ್) ಒಂದು ನಿತ್ಯದ ಸಮಸ್ಯೆ. ಇಂತಹ ತೊಂದರೆ ಇದ್ದವರು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರ ಉಳಿಯಬಹುದು.

ರುಚಿ ಮತ್ತು ಪೌಷ್ಟಿಕ
ಮಡಕೆ ಆಹಾರವನ್ನು ಬೆಂಕಿ ಜ್ವಾಲೆಯ(ಸೌದೆ ಒಲೆ) ಮೇಲೆ ತಯಾರಿಸಲಾಗುತ್ತದೆ. ಇದರ ಆಹಾರ ರುಚಿಕರವಾಗಿರುವುದು ಮಾತ್ರವಲ್ಲ ಮತ್ತು ಪೌಷ್ಟಿಕಾಂಶವನ್ನು ನೀಡುತ್ತದೆ. ಇದರಿಂದಾಗಿ ಅದರ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದರಲ್ಲಿರುವ ಎಲ್ಲಾ ರೀತಿಯ ಪ್ರೋಟೀನ್ಗಳು ದೇಹದ ಅಪಾಯಕಾರಿ ರೋಗಗಳ ವಿರುದ್ಧ ರಕ್ಷಿಸುತ್ತವೆ.

ಮಲಬದ್ಧತೆಗೆ ಪರಿಹಾರ
ಆಧುನಿಕ ಜೀವನಶೈಲಿಯಲ್ಲಿ ಮಲಬದ್ಧತೆಯ ಸಮಸ್ಯೆ ಸಾಮಾನ್ಯವಾಗಿದೆ. ಮಲಬದ್ಧತೆಯಿಂದ ತೊಂದರೆಗೆ ಒಳಗಾಗಿರುವ ವ್ಯಕ್ತಿ ಮಡಿಕೆ/ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಪರಿಹಾರ ಪಡೆಯುತ್ತಾನೆ. ಇದರಿಂದ ಮಲಬದ್ಧತೆಯನ್ನು ಸ್ವಲ್ಪ ಸಮಯದಲ್ಲೇ ನಿವಾರಣೆ ಮಾಡಬಹುದು.

ಮಣ್ಣಿನ ಪಾತ್ರೆ ಏಕೆ?
ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುವುದಿಲ್ಲ ಎಂಬುದು ನಂಬಿಕೆ. ಅದೇ ನೀವು ಅಲ್ಯುಮಿನಿಯಂ ಪಾತ್ರೆಗಳಲ್ಲಿ ಆಹಾರ ತಯಾರಿಸುವುದರಿಂದ ಶೇ. 87ರಷ್ಟು ಪೋಷಕಾಂಶಗಳು ನಾಶವಾಗುತ್ತವೆ. ಹಿತ್ತಾಳೆ ಪಾತ್ರೆಯಲ್ಲಿ ತಯಾರಿಸಲ್ಪಡುವ ಆಹಾರದಲ್ಲಿ ಶೇ.7 ರಷ್ಟು ಪೋಷಕಾಂಶಗಳು ನಷ್ಟವಾಗುತ್ತದೆ. ಕಂಚಿನ ಪಾತ್ರೆಯಲ್ಲಿ ಶೇ. 3ರಷ್ಟು ನಾಶವಾಗುತ್ತದೆ. ಹಾಗಾಗಿ ಮಣ್ಣಿನ ಪಾತ್ರೆ ಆಹಾರ ತಯಾರಿಸಲು ಉತ್ತಮ ಆಯ್ಕೆಯಾಗಿದೆ.

Leave a Reply