ಮಧುರೆ: ಏಳು ವರ್ಷದ ಪುತ್ರಿಗೆ ವಿಷ ವುಣಿಸಿ ಕೊಲೆಯೆಸಗಿದ ಬಳಿಕ 40 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶ್ರಮಿಸಿದ್ದಾನೆ. ತೂತ್ತುಕ್ಕುಡಿ ರಾಜೀವ್ ನಗರದ ಮಹೇಶ್ವರ ಪುತ್ರಿಯನ್ನು ಅನ್ಯಾಯವಾಗಿ ಕೊಂದ ಆರೋಪಿಯಾಗಿದ್ದಾನೆ.
ಇಲಿ ಪಾಷಣ ತಿಂದು ತಾನೂ ಸಾಯಲು ನೋಡಿದ್ದಾನೆ. ವಿದೇಶಕ್ಕೆ ತೆರಳಲು ವಿಮಾನ ಟಿಕೆಟಿಗೆ ಪತ್ನಿ ಹಣ ನೀಡದ ಕೋಪದಲ್ಲಿ ಮಹೇಶ್ವರ ಇಂತಹ ದುಸ್ಸಾಹಸಕ್ಕಿಳಿದಿದ್ದನು ಎಂದು ಪೊಲೀಸರು ತಿಳಿಸಿದರು.
ಮೆಕಾನಿಕ್ ವೃತ್ತಿಯ ಮಹೇಶ್ವರನ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದನು. ಇತ್ತೀಚೆಗೆ ಊರಿಗೆ ಬಂದಿದ್ದನು.ಆದರೆ ಊರನಲ್ಲಿ ಕೆಲಸ ಮಾಡಲು ಇಷ್ಟ ಇಲ್ಲದ್ದರಿಂದ ಪುನಃ ವಿದೇಶಕ್ಕೆ ತೆರಳಲು ಆತ ಬಯಸಿದ್ದನು. ಆದ್ದರಿಂದ ಪತ್ನಿಯ ಬಳಿ ವಿದೇಶಕ್ಕೆ ವಿಮಾನ ಟಿಕೆಟಿನ ಹಣವನ್ನು ಪತ್ನಿಯ ಬಳಿ ಕೇಳಿದ್ದಾನೆ . ಆದರೆ ಪತ್ನಿ ಹಣ ಕೊಡಲಿಲ್ಲ. ಇದರಿಂದಿಬ್ಬರಿಗೂ ಜಗಳವಾಗಿದೆ. ವಿಮಾನ ಟಿಕೆಟ್ಗೆ ಹಣ ಸಿಕ್ಕಿಲ್ಲವಲ್ಲ ಎಂಬ ಹತಾಶೆಯಿಂದ ಮಗಳನ್ನು ಕೊಂದು ತಾನು ಆತ್ಮಹತ್ಯೆಗೆ ಶ್ರಮಿಸಿದ್ದಾನೆ.
ವಿಷ ಸೇವಿಸಿ ವಿವಶ ಸ್ಥಿತಿಯಲ್ಲಿದ್ದ ಮಹೇಶ್ವರನ್ ಮತ್ತು ಪುತ್ರಿಯನ್ನು ಆಸ್ಪತ್ರೆಗೆ ಸೇರಿಸಲಾದರೂ ಬಾಲಕಿ ಇಹಲೋಕ ತ್ಯಜಿಸಿದಳು. ಮಹೇಶ್ವರನ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.