ದುಬೈ: ನಟಿ ಶ್ರೀದೇವಿಯ ತಲೆಯ ಭಾಗದಲ್ಲಿ ಆಳವಾದ ಗಾಯವಾಗಿದೆಯೆಂದು ಫೊರೆನ್ಸಿಕ್ ವರದಿಯಲ್ಲಿ ಹೇಳಲಾಗಿದೆ.

ಇದು ಹೇಗೆ ಸಂಭವಿಸಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಏನಾದರೂ ನ್ಯೂನತೆಯಿಂದ ಘಟಿಸಿದೆಯೇ ಎಂದೂ ತಪಾಸಿಸಲಾಗುತ್ತಿದೆ. ಹಾಗೇನಾದರೂ ಆಗಿದ್ದರೆ ಅದನ್ನು ಹೆಚ್ಚಿನ ತನಿಖೆಗೆ ಹೋಗದೆ ಶವವನ್ನು ಬಿಟ್ಟು ಕೊಡಲಾಗುವುದು. ಆದರೆ ಸಂಶಯಗಳೇನಾದರೂ ಉದ್ಭವಿಸಿದರೆ ಹೆಚ್ಚಿನ ತಪಾಸಣೆಗೆ ಹೋಗಲಾಗುವುದು.
ಮೃತದೇಹ ಭಾರತಕ್ಕೆ ತರಲು ವಿಳಂಬವಾಗುವ ಸಾದ್ಯತೆಯಿದೆ.

ಶ್ರೀ ದೇವಿಯ ಸಾವಿನ ಕುರಿತ ಹೆಚ್ಚಿನ ತನಿಖೆಗೆ ಪಬ್ಲಿಕ್ ಪ್ರಾಸಿಕೂಟರ್ ಬಯಸಿದರೆ ಮ್ರತ ದೇಹ ಭಾರತಕ್ಕೆ ತರುವ ವಿಚಾರ ಅನಿಶ್ಚಿತತೆಯಲ್ಲಿರುವುದು.

ಪತಿ ಬೋನಿ ಕಪೂರ್‍ರನ್ನು ದುಬಾಯಿ ಪೋಲೀಸು ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಳಿಕ ಹೋಟೇಲ್‍ಗೆ ಮರಳಲು ಬೋನಿ ಕಪೂರ್‍ಗೆ ಅನುಮತಿ ನೀಡಲಾಗದೆ. ಆದರೂ ಶ್ರೀದೇವಿಯ ಸಾವಿನ ಕುರಿತ ತನಿಖೆಯು ಸುದೀರ್ಘವಾಗುವುದಾದರೆ ಅದು ಮುಗಿಯುವ ತನಕ ಯುಎಇ ಯಲ್ಲಿಯೇ ತಂಗಬೇಕಾಗುವುದು ಎಂದು ತಿಳಿದು ಬಂದಿದೆ.

Leave a Reply