ಕ್ಯಾಲಿಕಟ್: ಶಬರಿಮಲೆಗೆ ಹೋಗಲುಮಾಲೆ ಹಾಕಿದ ಮಹಿಳೆಯನ್ನು ಅವರು ದುಡಿಯುತ್ತಿದ್ದ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ. ಕ್ಯಾಲಿಕಟ್ ಖಾಸಗಿ ಸಂಸ್ಥೆಯೊಂದು ಸೇಲ್ಸ್ ವಿಭಾಗದಿಂದ ಕೆಲಸದಿಂದ ಮಾಲೆಹಾಕಿದ ಯುವ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದು ಮ್ಯಾನೇಜ್ಮೆಂಟ್ ಕ್ರಮ ಜರಗಿಸಿದೆ ಎಂದು ಆರೋಪ ಕೇಳಿ ಬಂದಿದೆ.
ಕಳೆದ ದಿವಸ ಒಂದು ದೇವಸ್ಥಾನದಲ್ಲಿ ಶಬರಿಮಲೆಗೆ ಹೋಗಲು ಮಹಿಳೆ ಮಾಲೆ ಹಾಕಿದ್ದರು. ಇದನ್ನು ಅವರು ಫೇಸ್ಬುಕ್ನಲ್ಲಿ ಬಹಿರಂಗಗೊಳಿಸಿದ್ದರು.
ಮಾಲೆ ಹಾಕಿದ ಬಳಿಕ ಮಹಿಳೆಯ ವಿರುದ್ಧ ತೀವ್ರ ರೀತಿಯ ಸೈಬರ್ ದಾಳಿ ನಡೆದಿದೆ. ಯುವತಿ ಕೆಲಸ ಮಾಡುವ ಸಂಸ್ಥೆಗೆ ಬಂದು ಕೆಲವರು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ನಂತರ ಯುವತಿಯನ್ನು ತಾತ್ಕಾಲಿಕವಾಗಿ ರಜೆಗೆ ತೆರಳುವಂತೆ ಸಂಸ್ಥೆಯ ಹೆಡ್ ಆಫೀಸಿನಿಂದ ಆದೇಶ ಬಂದಿದೆ.
ಸೇಲ್ಸ್ ವಿಭಾಗವಾದ್ದರಿಂದ ಗ್ರಾಹಕರಿಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕಾಗಿ ಮ್ಯಾನೇಜ್ಮೆಂಟ್ ಈ ಕಾರಣ ನೀಡಿದೆ. ಆದರೆ ಇದು ಕೆಲಸದಿಂದ ತೆಗೆದು ಹಾಕಲು ಕೈಗೊಂಡ ಉಪಾಯ ಎಂದು ಮಹಿಳೆ ಹೇಳುತ್ತಿದ್ದಾರೆ ಎಂದು ಮಹಿಳೆಯ ಗೆಳತಿ ತಿಳಿಸಿದ್ದಾರೆ.