ಬೀದರ್: ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚಿ ರಾಜಕೀಯ ಮಾಡಿದ್ದೇ ಸೋನಿಯಾ ಗಾಂಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ‌ಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.

ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸೋನಿಯಾ ಗಾಂಧಿ ಮೇಲೆ ಕಿಡಿಕಾರಿ, ರಾಹುಲ್ ಗಾಂಧಿ ಅವರು ತನ್ನ ರಾಜ್ಯದಲ್ಲಿ ಮಹದಾಯಿ ವಿಚಾರದಲ್ಲಿ ತಲೆ ಹಾಕದೆ ತಪ್ಪಿಸಿಕೊಳ್ಳುವ ಪ್ರಯತ್ನಪಡುತ್ತಿದ್ದಾರೆ, ಅವರು ಮೊದಲು ಮಹದಾಯಿ ವಿಚಾರದ ಕುರಿತು ಮಾತಾಡಲಿ ಎಂದರು.

ಟ್ರಿಬ್ಯೂನಲ್ ರಚನೆ ಮಾಡಿದ್ದು ಕಾಂಗ್ರೆಸ್ ಪಕ್ಷ, ಸುಪ್ರೀಂ ಮೆಟ್ಟಿಲೇರಿದ್ದೂ ಅವರೇ. ಮಹದಾಯಿ ಸಮಸ್ಯೆಯ ಮೂಲ ರೂವಾರಿಗಳು ಕಾಂಗ್ರೆಸ್ ಪಕ್ಷದವರೇ, ಹೀಗಾಗಿ ಅವರೇ ಕಾರಣ ಎಂದು ಯಡಿಯೂರಪ್ಪ ಕಿಡಿಕಾರಿದರು.

 

ಇನ್ನೂ ಮಹದಾಯಿಗೆ ಸಂಬಂಧಿಸಿದಂತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿಚಾರವನ್ನು ಬಗೆಹರಿಸುತ್ತೇವೆ ಎಂದು ಯಡಿಯೂರಪ್ಪ ಇದೇ ವೇಳೆ ಹೇಳಿದರು.

ಯಡಿಯೂರಪ್ಪ ಅವರು ಇಂದಯ 75ನೆಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಬಿಜೆಪಿ ದಾವಣಗೆರೆಯಲ್ಲಿ ಆಯೋಜಿಸಿದ ಬೃಹತ್ ರೈತ ಸಮಾವೇಶ ಆಯೋಜಿಸಿದ್ದು, ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತರನ್ನುದ್ದೇಶಿ ಮಾತಾನಾಡಲಿದ್ದಾರೆ.

Leave a Reply