ನಾಳೆಯೇ ನಿಮ್ಮ ಕೊನೆಯ ದಿನವೆಂಬಂತೆ ತೀವ್ರವಾಗಿ ಬದುಕಿರಿ. ಆದರೆ ಏನನ್ನಾದರೂ ಕಲಿಯುವಾಗ ಮಾತ್ರ “ನಾನು ಎಂದೆಂದಿಗೂ ಬದುಕಿರುತ್ತೇನೆ” ಎನ್ನುವ ಭಾವನೆಯಿಂದ ಕಲಿಯಿರಿ.
– ಮಹಾತ್ಮ ಗಾಂಧಿ
ಎರಡು ರೀತಿಯಲ್ಲಿ ನಾವು ಬದುಕಬಹುದು. ಜಗತ್ತಿನಲ್ಲಿರುವ ಯಾವುದರಲ್ಲೂ ಏನೂ ಪವಾಡವಿಲ್ಲ ಎಂದು ತಿಳಿದು ಬದುಕಬಹುದು. ಅಥವಾ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಪವಾಡಗಳನ್ನು ಕಾಣುತ್ತಾ ಬದುಕಬಹುದು. ಯಾವುದು ಸರಿ ಅನ್ನುವುದು(ಆಯ್ಕೆ) ನಮಗೇ ಸೇರಿದ್ದು!
– ಆಲ್ಬರ್ಟ್ ಐನ್ಸ್ಟೈನ್
ನೀವು ಮಾಡಿದ ತಪ್ಪಿನ ಅರಿವಾದಾಗ ತಿದ್ದಿಕೊಳ್ಳಲು ಕೂಡಲೇ ಯತ್ನಿಸಿ.
-ದಲೈಲಾಮ
ನಗುವುದು ಸಹಜ ಧರ್ಮ, ನಗಿಸುವುದು ಪರರ ಧರ್ಮ, ನಗಿಸಿ ನಗುತ ಬಾಳುವುದು ಅದವೇ ಮಾನವಧರ್ಮ.
-ಡಿ.ವಿ.ಗುಂಡಪ್ಪ
ನೀವೇಷ್ಟು ವರ್ಷ ಬದುಕುತ್ತೀರಿ ಎನ್ನುವುದು ಮುಖ್ಯವಲ್ಲ.
ನೀವಿರುವ ವರ್ಷಗಳಲ್ಲಿ ಬದುಕೆಷ್ಟಿದೆ ಎನ್ನುವುದೇ ಮುಖ್ಯ.
– ಅಬ್ರಹಾಂ ಲಿಂಕನ್
ದ್ವೇಷಕ್ಕೆ ಸಮಯ ಕೊಡುವುದು ಆತ್ಮಹತ್ಯೆಯ ಯೋಚನೆಗೆ ವ್ಯಯಿಸುವುದಕ್ಕೆ ಸಮ.
– ಸೂಫಿ ಸನಾಯಿ
ಆರೋಗ್ಯವೇ ಉತ್ತಮ ಉಡುಗೊರೆ.
ಕಾರುಣ್ಯತೆಯೇ ಉತ್ತಮ ಸಂಪತ್ತು ಮತ್ತು
ವಿಶ್ವಾಸಾರ್ಹತೆಯೇ ಉತ್ತಮ ಬಾಂಧವ್ಯ.
– ಗೌತಮ ಬುದ್ಧ
ಯಾವುದನ್ನು ಮಾಡಲು ನಮಗೆ ಅರ್ಹತೆ ಇರುವುದಿಲ್ಲವೋ ಅದಕ್ಕಾಗಿ ಸಮಯ ವ್ಯಯಿಸಬಾರದು.
– ಚಾಣಕ್ಯ
ಪ್ರಾರ್ಥನೆ ಹೃದಯದ ಸಂಗೀತ
– ಜಿಬ್ರಾನ್
ಸತ್ಯವನ್ನು ಎಲ್ಲಾ ಕಡೆಯಿಂದಲೂ ಪರಾಮರ್ಶಿಸಿ ನೋಡು.
-ಶ್ರೀ ರಾಮಕೃಷ್ಣ ಪರಮಹಂಸರು
ಒಂದು ಪಕ್ಷಿ ಅಥವಾ ಅದಕ್ಕಿಂತಲೂ ಸಣ್ಣ ಯಾವುದಾದರೂ ಜೀವಿಯನ್ನು ಯಾರಾದರೂ ಅನ್ಯಾಯವಾಗಿ ವಧಿಸಿದರೆ ಅಲ್ಲಾಹನು ಪುನರುತ್ಥಾನ ದಿನ ಅವನೊಡನೆ ಆ ಕುರಿತು
ವಿಚಾರಣೆ ಮಾಡುವನು.
-ಪ್ರವಾದಿ ಮುಹಮ್ಮದ್
ನೀನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು.
– ಏಸು ಕ್ರಿಸ್ತ