ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹರಿಯಾಣದ ರಿವಾರಿಯಲ್ಲಿ ಶಾಲೆಯಿಂದ ಮರಳುವ ವೇಳೆ ಏಳು ವರ್ಷದ ಬಾಲಕಿಯ ಅತ್ಯಾಚಾರ ಮಾಡಿದ ರಾಜು(35) ಎಂಬಾತನನ್ನುಪೊಲೀಸರು ಬಂಧಿಸಿದ್ದಾರೆ. ರಿವಾರಿಯಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರೊಬ್ಬರ ಪುತ್ರಿಯ ಅತ್ಯಾಚಾರಕ್ಕೊಳಪಡಿಸಿದ್ದು ಮಂಗಳವಾರ ಸಂಜೆ ಘಟನೆ ನಡೆದಿದೆ.

ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಚಾಕ್ಲೆಟ್ ಕೊಡಿಸುವ ನೆಪದಲ್ಲಿ ಆರೋಪಿ ಅತ್ಯಾಚಾರ ಮಾಡಿದ್ದಾನೆ. ಚಾಕ್ಲೆಟು ಕೊಡುವೆ ಎಂದು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋದ ರಾಜು ಈ ಕೃತ್ಯವೆಸಗಿದ್ದಾನೆ.

ದೇಹವಿಡಿ ರಕ್ತದಿಂದ ನೆನೆದ ವಿದ್ಯಾರ್ಥಿನಿ ಮನೆಗೆ ಬಂದಾಗ ಆಕೆ ಅತ್ಯಾಚಾರಕ್ಕೊಳಗಾಗಿದ್ದು ತಿಳಿದು ಬಂತು. ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿವೆ.

ಒಂದು ತಿಂಗಳು ಹಿಂದೆ ಸಿಬಿಎಸಿ ರ್ಯಾಂಕ್ ವಿಜೇತ ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಗುರಿಯಾದ ಅದೇ ಸ್ಥಳದಲ್ಲಿ ಬಾಲಕಿಯನ್ನು ಅತ್ಯಾಚಾರಕ್ಕೆ ಗುರಿಪಡಿಸಲಾಗಿದೆ. ಸೆಪ್ಟಂಬರ್ 12ರಂದು ಕೋಚಿಂಗ್ ಸೆಂಟರ್‍ಗೆ ಹೋಗಿ ಮರಳುತ್ತಿದ್ದ ವಿದ್ಯಾರ್ಥಿನಿಗೆ ಮಾದಕ ವಸ್ತು ತಿನ್ನಿಸಿ ಪ್ರಜ್ಞೆ ಕಳಕೊಂಡಾಗ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

Leave a Reply