ಗುವಾಹಟಿ: ಅಸ್ಸಾಮಿನ ಲಕ್ಕಿಂಪುರದಲ್ಲಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಅಪ್ರಾಪ್ತ ಹೆಣ್ಮಗಳನ್ನು ಬಳಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಜೂನ್ ಆರರಂದು ಕಾಂಗ್ರೆಸ್ ನೇತೃತ್ವದಲ್ಲಿ ಭರವಸೆ ಆಶ್ವಾಸನೆಗಳನ್ನು ಈಡೇರಿಸಲಾಗುತ್ತಿಲ್ಲವೆಂದು ಆರೋಪಿಸಿ ಕೇಂದ್ರದ ವಿರುದ್ಧ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಮಗಳೋರ್ವಳನ್ನು ಕಂಗಿನ ಹಾಳೆಯಲ್ಲಿ ಕುಳ್ಳಿರಿಸಿ ರಸ್ತೆಯಲ್ಲಿ ಎಳೆದು ಕೊಂಡು ಹೋಗಲಾಗಿತ್ತು. ಮಗುವಿನ ತಾಯಿ, ಪ್ರಾದೇಶಿಕ ಕಾಂಗ್ರೆಸ್ ಸದಸ್ಯೆ ಜೀತುಮಣಿದಾಸ್ ಸ್ಥಳೀಯ ಪತ್ರಕರ್ತ ಕುಮುದ್ ಬರುವ ಮುಂತಾದವರು ಬಂಧಿತರು.

ಪುಟ್ಟ ಹೆಣ್ಣು ಮಗುವನ್ನು ಬಳಸಿ, ಪ್ರತಿಭಟನೆಯ ಹೆಸರಿನಲ್ಲಿ ಕಾಂಗ್ರೆಸ್ ಅಗ್ಗದ ಪ್ರಚಾರವನ್ನು ಪಡೆಯುತ್ತಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

Leave a Reply