ಡೆಹ್ರಾಡೂನ್: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಮೃತದೇಹವನ್ನು ಅವರ ಮನೆಗಳಿಗೆ ತಲಪಿಸಲಾಗುತ್ತಿದೆ. ಹುತಾತ್ಮ ಸೈನಿಕರ ಅಂತ್ಯ ಸಂಸ್ಕಾರಕ್ಕಾಗಿ ಪ್ರತಿ ನಗರದಲ್ಲಿ ಹೆಚ್ಚಿನ ಜನಸಂದಣಿ ಕಾಣುತ್ತಿದೆ. ಒದ್ದೆಯಾದ ಕಣ್ಣುಗಳಿಂದ ಜನ ಸೈನಿಕರಿಗೆ ವಿದಾಯ ಹೇಳುತ್ತಿದ್ದಾರೆ. ಜನ ಪ್ರತಿನಿಧಿಗಳು ಹುತಾತ್ಮರಿಗೆ ಗೌರವ ಸಲ್ಲಿಸಲು ತಲಪುತ್ತಿದ್ದು, ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. ಹುತಾತ್ಮ ಯೋಧ ಮೋಹನ್‌ ಲಾಲ್‌ ಪಾರ್ಥಿವ ಶರೀರಕ್ಕೆ ಡೆಹ್ರಾಡೂನ್ ನಲ್ಲಿ ಅಂತಿಮ ನಮನ ಸಲ್ಲಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಹುತಾತ್ಮ ಯೋಧ ಮೋಹನ್ ಲಾಲ್ ಮಗಳು ತಂದೆಗೆ ಸೆಲ್ಯೂಟ್ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದಳು. ಮೋಹನ್‌ ಲಾಲ್‌ ಕುಟುಂಬಸ್ಥರಲ್ಲಿ ದು:ಖ ಮಡುಗಟ್ಟಿದ್ದು, ಕಣ್ಣೀರಿಟ್ಟಿದ್ದಾರೆ. ಯೋಧನ ಪುತ್ರಿ ಸಹ ಕಣ್ಣೀರಿಟ್ಟಿದ್ದಾಳೆ.

Leave a Reply