ಸಾಂದರ್ಭಿಕ ಚಿತ್ರ

ಬೆಂಗಳೂರು: ಕುಟುಂಬ ಕಲಹದಿಂದ ಪತಿಯೊಬ್ಬರು ಪತ್ನಿಯನ್ನು ಉಸಿರು ಕಟ್ಟಿಸಿ ಕೊಂದ ಘಟನೆ ಇಲ್ಲಿನ ಲಕ್ಷ್ಮಿ ದೇವಿಯ ನಗರದಲ್ಲಿ ನಡೆದಿದೆ. ಆಂಧ್ರ ಪ್ರದೇಶದಿಂದ ಹತ್ತು ವರ್ಷಗಳಿಗಿಂತ ಹಿಂದೆ ಬಂದ ಕಲ್ಪನಾ ರಮೇಶ್ ದಂಪತಿಗಳು ಬೆಂಗಳೂರಲ್ಲಿ ವಾಸವಾಗಿದ್ದರು. ಈರ್ವರ ಮಧ್ಯೆ ಕೆಲದಿನಗಳಿಂದ ಜಗಳ ವಾಗ್ವಾದ ನಡೆಯುತ್ತಿತ್ತು.

ಹಲವು ಬಾರಿ ಪತ್ನಿಯನ್ನು ಮೇಲೆ ಆತ ಹಲ್ಲೆಗೈಯುತ್ತಿದ್ದ ಎಂದು ಪರಿಸರ ವಾಸಿಗಳು ಹೇಳಿದ್ದಾರೆ, ಘಟನೆ ನಡೆದ ದಿನವೂ ಈರ್ವರ ಮಧ್ಯೆ ಜಗಳವಾಗಿದೆ. ಮುಂಜಾನೆ ನಾಲ್ಕು ಗಂಟೆಗೆ ಪ್ರಾರಂಭವಾದ ಜಗಳ ಬೆಳಗ್ಗೆ ಐದರ ವರೇಗೂ ನಡೆದಿತ್ತು. ವಾಗ್ವಾದ ತರ್ಕ ಬಿಸಿಯೇರಿ ಬಳಿಕ ರಮೇಶ್ ಪತ್ನಿ ಕಲ್ಪನಾಳನ್ನು ಉಸಿರುಗಟ್ಟಿಸಿ ಕೊಂದನು. ಶನಿವಾರ ಮಗಳನ್ನು ನೋಡಲು ಬಂದ ಕಲ್ಪನಾಳ ತಾಯಿ ಸತ್ತು ಬಿದ್ದಿದ್ದ ಮಗಳನ್ನು ನೋಡಿದರು. ಕೂಡಲೇ ಪೋಲೀಸು ಠಾಣೆಗೆ ದೂರಿತ್ತರು, ಈರ್ವರೂ ಗಾರ್ಮೆಂಟ್ ಕೆಲಸಗಾರರಾಗಿದ್ದರು. ಪೋಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Leave a Reply