ಮುಂಬೈ: ವಿನೂಮಂಕಡ್ ಟ್ರೋಪಿಯಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಐದು ವಿಕೆಟ್ ಕಿತ್ತು ಮಿಂಚಿದ್ದಾರೆ.ಎಲೈಟ್ ಗ್ರೂಪ್ ಎರಡನೆ ಸುತ್ತಿನಲ್ಲಿ ಮುಂಬೈ-ಗುಜರಾತ್‍ಗಳ ನಡುವಿನ ಪಂದ್ಯದಲ್ಲಿ ಅರ್ಜುನ್ ಈ ಸಾಧನೆ ಮಾಡಿದ್ದು ಗುಜರಾತ್ 142 ರನ್‍ಗೆಆಲೌಟ್ ಆಗಿದೆ.

ವರ್ಧಮಾನ್ ದತ್ತೇಶ್ ಶಾ(0), pಯೂಶ್(1), ಎಲ್‍ಎಂ ಕೋಚರ್(8),ಜಯಮೀತ್ ಪಟೇಲ್(26), ಧುರವಂಗ್ಪಟೇಲ್(6)ರನ್ನು ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಔಟ್ ಮಾಡಿದ್ದಾರೆ. ತಾನೆಸೆದ 8. 2 ಓವರ್ ಕೋಟಾದಲ್ಲಿ ಒಂದು ಮೇಡನ್ ಓವರ್ ಸಹಿತ 30 ರನ್ ತೆತ್ತು ಐದು ವಿಕೆಟ್ ಸಂಪಾದಿಸಿದ್ದಾರೆ.

143 ರನ್ ವಿಜಯ ಗುರಿಯೊಂದಿಗೆ ಬ್ಯಾಟಿಂಗ್‍ಗೆ ಇಳಿದ ಮುಂಬೈಯ ಆರಂಭಿಕ ಆಟಗಾರರಾದ ಸುವೇನ್ ಪಾರ್ಕರ್ ಮತ್ತು ದಿವ್ಯಾಂಶು ಶತಕದ ಜತೆಯಾಟ ನಡೆಸಿದರು. ಈ ತಿಂಗಳ ನಡೆದ ಭಾರತದ ಅಂಡರ್ -19 ತಂಡದಲ್ಲಿ ಅರ್ಜುನ್‍ಗೆ ಸ್ಥಾನ ಸಿಕ್ಕಿತ್ತು. ಶ್ರೀಲಂಕಾ ವಿರುದ್ಧ ಯೂತ್ ಟೆಸ್ಟ್ ಸರಣಿಇದಾಗಿತ್ತು. ತಾನೆಸದ ಮೊದಲ ಓವರ್‍ನಲ್ಲಿಯೇ ಅರ್ಜುನ್ ವಿಕೆಟ್ ಕಿತ್ತಿದ್ದಾರೆ.

Leave a Reply