ಉಡುಪಿ : ಶಬರಿ ಮಲೆಗೆ ಮಹಿಳೆಯರ ಪ್ರವೇಶದ ಕುರಿತು ವ್ಯಾಪಕ ವಿವಾದವಾಗಿರುವಾಗ, ಮಹಿಳೆಯರು ಶಬರಿ ಮಲೆಗೆ ಹೋಗುವ ಕುರಿತು ನನಗೆ ಯಾವುದೇ ಆಕ್ಷೇಪ ಇಲ್ಲನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉಡುಪಿಯ ಪೇಜಾವರ ಶ್ರೀಯವರು ಹೇಳಿದ್ದಾರೆ.

ನಮ್ಮಲ್ಲಿ ಮಹಿಳೆಯರು ಕೃಷ್ಣಾ ದೇವರ ದರ್ಶನಕ್ಕೆ ಬರುತ್ತಾರೆ. ಶಿವನ ದೇವಸ್ಥಾನಕ್ಕೆ ಮಾತ್ರವಲ್ಲ, ಸುಬ್ರಮಣ್ಯ ದೇವಾಲಯಕ್ಕೂ ಮಹಿಳೆಯರು ಬರುತ್ತಾರೆ. ಆದ್ದರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ನನಗೆ ಆಕ್ಷೇಪ ಇಲ್ಲ. ಆದರೂ ಶಬರಿ ಮಲೆಯ ಸಂಪ್ರದಾಯ ಬೇರೆಯೇ ಇದೆ. ಈ ಬಗ್ಗೆ ನಾನು ಮಧ್ಯ ಪ್ರವೇಶಿಸುವದಿಲ್ಲ . ಅವುಗಳ ಇತ್ಯರ್ಥಕ್ಕೆ ನ್ಯಾಯಾಲಯ ಅರ್ಚರಕರು, ಭಕ್ತರು ಇದ್ದಾರೆ. ಅವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಅನವಶ್ಯಕ ಗೊಂದಲ ಆಗಬಾರದು. ದೇವಾಲಯದ ಸಂಪ್ರದಾಯದ ಕುರಿತು ನಾವು ಮಾತನಾಡುವುದು ಸರಿಯಲ್ಲ ಎಂದು ಪೇಜಾವರ ಶ್ರೀ ಯವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

Leave a Reply