representational Image

ಹತ್ತು ಸಾವಿರ ಸಾಲ ಮರು ಪಾವತಿಸಿಲ್ಲ ಎಂದು ನೆರೆ ಮನೆಯ ಎರಡೂವರೆ ವರ್ಷದ ಪುಟ್ಟ ಮಗುವನ್ನು ಅಪಹರಿಸಿ ಕೊಂದ ರಾಕ್ಷಸೀಯ ಘಟನೆ ಉತ್ತರ ಪ್ರದೇಶದ ತಪ್ಪಲ್ ಟೌನ್ ನಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮಗುವಿನ ಮೃತದೇಹವು ಕಣ್ಣು ಕೀಳಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಮಗು ಕಾಣೆಯಾಗಿತ್ತು, ಬಳಿಕ ಹತ್ತಿರದ ಮೈದಾನದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಮಾಧ್ಯಮದ ವರದಿಗಳು ಹೇಳಿವೆ. ಬೀದಿನಾಯಿಗಳು ಮಗುವಿನ ಮೃತದೇಹವಿದ್ದ ಚೀಲವನ್ನು ಕೊಂಡು ಹೋಗುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಚೀಲದೊಳಗೆ ಮಗುವಿನ ಅಂಗಹೀನ ಗೊಂಡ ಮೃತ ದೇಹ ಪತ್ತೆಯಾಗಿದೆ. ಇಬ್ಬರು ಆರೋಪಿಗಳನ್ನು ಜಹೀದ್ ಮತ್ತು ಅಸ್ಲಮ್ ಎಂದು ಗುರುತಿಸಲಾದ್ದು, ಇಬ್ಬರೂ ಕೊಲೆಯಾದ ಹುಡುಗಿಯ ನೆರೆಯವರು. ವೈಯಕ್ತಿಕ ದ್ವೇಷ ಮತ್ತು ಸಾಲ ಮರುಪಾವತಿಯ ಕೋಪದಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಗುವಿನ ಮೃತ ದೇಹದಲ್ಲಿ ಅತ್ಯಾಚಾರದ ಕುರುಹು ಕಂಡು ಬಂದಿಲ್ಲ. ಮಾತ್ರವಲ್ಲ, ಇಬ್ಬರು ಆರೋಪಿಗಳು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಈ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಟ್ವಿಟ್ಟರಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave a Reply