ಚೆನ್ನೈ: ಮಾಜಿ ಹಣಕಾಸು ಸಚಿವ ಪಿ, ಚಿದಂಬರಮ್ ಪುತ್ರ ಕಾರ್ತಿಕ್ ಚದಂಬರಮ್ ರನ್ನು ಪೋಲೀಸರು ಬಂಧಿಸಿದ್ದಾರೆ.
ಎನ್. ಎಕ್ಸ್. ಮೀಡಿಯಾ ಕಪ್ಪು ಹಣವನ್ನು ಬಿಳಿಯಾಗಿಸಲು ಸಹಕರಿಸಿದ ಆರೋಪದಲ್ಲಿ ಈ ಬಂಧನ ನಡೆದಿದೆ.

ಇಂದು ಬೆಳಿಗ್ಗೆ ಲಂಡನ್‍ನಿಂದ ಬಂದಿಳಿದ ಕಾರ್ತಿಕ್‍ರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಐ. ಎನ್. ಎಕ್ಸ್. ಮೀಡಿಯಾ ಕಂಪೆನಿಗೆ ಎಫ್.ಐ.ಪಿ.ಬಿ. ಯ ಅನುಮತಿ ತೆಗೆದು ಕೊಡಲು ಲಂಚ ಪಡೆದ ಪೃಕರಣವಿದು.

2007ರಲ್ಲಿ ಹಣಕಾಸು ಸಚಿವಾಲಯದ ಪ್ರಭಾವ ಬೀರಿ ಎಫ್.ಪಿ.ಬಿ. ಯ ಕಾನೂನು ಉಲ್ಲಂಘಿಸಿ ಐ.ಎನ್.ಎಕ್ಸ್.ಮೀಡಿಯಾಕ್ಕೆ ಮೊರಿಶಿಯಸ್‍ನಿಂದ ನಿಕ್ಷೇಪ ಲಭಿಸಲು ಬೇಕಾಗಿ ಎಫ್.ಐ.ಪಿ.ಬಿ. ಅನುಮತಿ ತೆಗೆದು ಕೊಟ್ಟಿದ್ದಾರೆಂಬ ಆರೋಪ ಕಾರ್ತಿಕ್ ವಿರುದ್ಧ ಇದೆ.

Leave a Reply