ಮುಂಬೈ: ಬಾಲಿವುಡ್ ನಟರಾದ ನಾನಾ ಪಟೇಕರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಗಳ ಕುರಿತು ಬಹಿರಂಗಪಡಿಸಿದ ತನುಶ್ರೀದತ್ತ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಿಪಬ್ಲಿಕ್ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ನಾನಾಪಟೇಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.ಆದರೆ ತನುಶ್ರೀಯ ಈ ಎಲ್ಲ ಹೇಳಿಕೆಗಳು ನಟನೆಯಾಗಿದೆ.ಮುಂದಿನ ಬಿಗ್‍ಬಾಸ್ ಸೀಝನ್‍ನಲ್ಲಿ ಅವಕಾಶ ಪಡೆಯಲು ತನುಶ್ರೀ ಈರೀತಿ ಶ್ರಮಿಸುತ್ತಿದ್ದಾರೆಎಂದು ಆರೋಪ ಕೇಳಿಬಂದಿತ್ತು.

ಇದರ ಕುರಿತು ತನುಶ್ರೀ ಬಿಗ್ ಬಾಸ್‍ನಲ್ಲಿ ಭಾಗವಹಿಸುವುದು ಅಷ್ಟುದೊಡ್ಡ ಘಟನೆಯೇನಲ್ಲ ಎಂದಿದ್ದಾರೆ ಸಲ್ಮಾನ ದೇವರು ಬಿಗ್‍ಬಾಸ್ ಸ್ವರ್ಗ ಎಂಬ ಅಭಿಪ್ರಾಯ ತನಗಿಲ್ಲ ಎಂದು ಹೇಳಿದ್ದಾರೆ.

ನಾನು ಮುಂದಿನ ಬಿಗ್ ಬಾಸ್‍ನಲ್ಲಿ ಸ್ಥಾನ ಪಡೆಯಲು ಹೀಗೆಲ್ಲ ಮಾಡುತ್ತಿದ್ದೇನೆ ಎನ್ನುವುದೇ ತನಗೆ ಅವಮಾನ ಮಾಡುವುದು ಆಗಿದೆ. ಅದು ನಿಮಗೆ ನನ್ನ ದೊಡ್ಡ ಬಯಕೆಯಾಗಿ ಭಾವಿಸಿದ್ದೀರಾ ಆದರೆ ನಾನು ಹಾಗೆ ಭಾವಿಸಿಕೊಂಡಿಲ್ಲ. ಸಲ್ಮಾನ್ ದೇವರು, ಬಿಗ್‍ಬಾಸ್ ಸ್ಮರ್ಗವೆಂದು ನಿಮ್ಮ ಅಭಿಪ್ರಾಯವೇ . ನಾನು ಹಾಗೆ ಭಾವಿಸಿಲ್ಲ.

ಇಷ್ಟುದಿವಸ ನನಗೆ ಬಿಗ್ ಬಾಸ್ ಕೋಟ್ಯಂತರ ರೂಪಾಯಿ ಭರವಸೆ ನೀಡಿತ್ತು. ಆದರೂ ನಾನು ಆಗುವುದಿಲ್ಲ ಎಂದೆ. ಯಾಕೆಂದರೆ ನನಗೆ ಇಕ್ಕಟ್ಟು ಸ್ಥಳಗಳು ಮತ್ತು ಮುಚ್ಚಿದ ಕೋಣೆಯ ಭಯವಿದೆ. ನನಗೆ ಹೊರಗೆ ನಡೆದಾಡಲು ಸಾಧ್ಯವಾಗಬೇಕು ಎಂದು ತನುಶ್ರೀದತ್ತ ಹೇಳಿದರು.

ಈ ಹಿಂದೆ ತನುಶ್ರೀ ನಾನಾ ಪಟೇಕರ್ ಕುರಿತ ಆರೋಪಗಳ ಕುರಿತು ಸಲ್ಮಾನ್ ಖಾನ್‍ರಲ್ಲಿ ಪ್ರತಿಕ್ರಿಯೆ ಕೇಳಿದಾಗ ನಾನಂಥದೊಂದು ಘಟನೆಯ ಬಗ್ಗೆ ಕೇಳಿಲ್ಲ ಎಂದು ಸಲ್ಮಾನ್ ಹೇಳಿದ್ದರು. ಒಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 2009ರಲ್ಲಿ ತನ್ನ ಮೇಲೆ ನಡೆದ ಲೈಂಗಿಕ ಕಿರುಕುಳಗಳ ಕುರಿತು ತನುಶ್ರೀ ವಿವರಿಸಿದ್ದರು. ಹಾರ್ನ್ ಓಕೆಪ್ಲೀಸ್ ಸಿನೆಮಾದ ಹಾಡಿನ ಚಿತ್ರೀಕರಣದ ವೇಳೆ ಕಿರುಕುಳ ಯತ್ನ ನಡೆದಿತ್ತು ಎಂದು ತನುಶ್ರೀ ಹೇಳಿದ್ದರು.

ಆದರೆ ತನುಶ್ರೀ ಆರೋಪ ಸುಳ್ಳೆಂದು ನಾನಾ ಪಟೇಕರ್ ಹೇಳಿದ್ದಾರೆ. ನೂರಾರು ಮಂದಿಯ ಮುಂದೆ ನಾನು ಯಾವ ಕಿರುಕುಳ ನೀಡಿದೆ. ಆರೋಪವನ್ನು ಕಾನೂನಿನ ಮೂಲಕ ಎದುರಿಸುವೆ ಎಂದು ನಾನಾಪಟೇಕರ್ ಹೇಳಿದ್ದರು. ಬಾಲಿವುಡ್‍ಗೆ ಮರಳಲು ತನುಶ್ರೀ ಸೃಷ್ಟಿಸಿದ ಒಂದು ವಿವಾದ ಇದು ಎಂದು ಹಾನ್ ಓಕೆಪ್ಲೀಸ್ ನಿರ್ದೇಶಕ ರಾಕೇಶ್ ಸಾರಂಗ್ ಹೇಳಿದ್ದಾರೆ.

Leave a Reply