![5cc92f4a240000b5002593b6](https://i2.wp.com/idunammaooru.in/wp-content/uploads/2019/05/5cc92f4a240000b5002593b6.jpeg?resize=630%2C424)
ಒಂದು ವೇಳೆ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 220 ಅಥವಾ 230 ಸೀಟುಗಳನ್ನು ಪಡೆದರೆ ಮೋದಿ ಪ್ರಧಾನಿಯಾಗುವುದು ಕಷ್ಟ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಸುಬ್ರಮಣ್ಯನ್ ಸ್ವಾಮಿ ಮಾಧ್ಯಮ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿ 230 ಅಥವಾ 220 ಸೀಟುಗಳನ್ನು ಗೆಲ್ಲಬಹುದು ಮತ್ತು ಮಿತ್ರಪಕ್ಷಗ 30 ಸೀಟುಗಳು ಸೇರಿ ಎನ್ಡಿಎಯಲ್ಲಿ ಒಟ್ಟು 250 ಸೀಟುಗಳನ್ನು ಖಾತ್ರಿ ಪಡಿಸಬಹುದು, ಆದರೂ ಸರಕಾರ ರಚಿಸಲು 30-40 ಸೀಟುಗಳ ಅವಶ್ಯಕತೆ ಇದ್ದು ಹೊಸ ಮೈತ್ರಿಕೂಟದ ಪಕ್ಷಗಳು ಮೋದಿಯನ್ನು ನಾವು ಪ್ರಧಾನಿಯಾಗಿ ನಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಸಾಧ್ಯತೆ ಕಡಿಮೆ, ಆದರೆ ಹೊಸ ಪಕ್ಷಗಳು ಮೈತ್ರಿ ಮಾಡಿ ಮೋದಿಯನ್ನು ಬೆಂಬಲಿಸಿದರೆ ಅವರೇ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.
ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗುವುದು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಯಾವತಿ ಕೂಡಾ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಬಿಎಸ್ಪಿ ಪಕ್ಷವನ್ನು ಕಣಕ್ಕಿಳಿಸಿದ್ದಾರೆ. ಒಂದು ವೇಳೆ ಬಿಎಸ್ಪಿ ಬೆಂಬಲ ನೀಡಿದರೂ ಅವರು ಪ್ರಧಾನಿ ಬದಲಾವಣೆಗೆ ಪಟ್ಟು ಹಿಡಿಯಬಹುದು ಎಂದಿದ್ದಾರೆ. ಮೋದಿಯ ಬದಲಿಗೆ ಗಡ್ಕರಿ ಪ್ರಧಾನಿಯಾದರೆ ಅದು ತುಂಬಾ ಅದ್ಭುತ ಮತ್ತು ಗಡ್ಕರಿಗೆ ಪಧಾನಿಯಾಗುವ ಅರ್ಹತೆ ಇದೆ. ಅವರೂ ಮೋದಿಯಂತೆ ಒಳ್ಳೆಯ ವ್ಯಕ್ತಿ ಎಂದು ಹೇಳಿದರು. ಪ್ರಧಾನಿ ಮೋದಿಯ ಸ್ಥಾನಕ್ಕೆ ನಿತಿನ್ ಗಡ್ಕರಿ ಯೋಗ್ಯ ನಾಯಕರಾಗಿದ್ದಾರೆ. ಒಂದು ವೇಳೆ ಮೋದಿಯ ಬದಲಿಗೆ ಗಡ್ಕರಿ ಆಯ್ಕೆಯಾದಲ್ಲಿ ತುಂಬಾ ಸಂತೋಷ. ಗಡ್ಕರಿ ಕೂಡಾ ಪ್ರಧಾನಿ ಮೋದಿಯಂತೆ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.