ಉತ್ತರ ಖಂಡ್ : ಮೊಬೈಲ್‍ಗೆ ಅಶ್ಲೀಲ ಮೆಸೇಜು ಕಳುಹಿಸುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನಿಗೆ ಐಪಿಎಸ್ ಅಧಿಕಾರಿಯೋರ್ವರ ಪತ್ನಿ ಚಪ್ಪಲಿ ಸೇವೆ ಮಾಡಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಈ ಐಪಿಎಸ್ ಅಧಿಕಾರಿಯ ಮನೆಯ ಬಳಿ ಬಿಜೆಪಿ ಕಾರ್ಯಕರ್ತನೂ ತನ್ನ ಕುಟುಂಬದೊಂದಿಗೆ ನೆಲೆಸಿದ್ದ. ತನ್ನ ಫೋನಿಗೆ ನಿರಂತರ ಅಶ್ಲೀಲ ಸಂದೇಶ ಕಳುಹಿಸುವ ಕುರಿತು ಯುವತಿ ರೆಸಿಡೆಂಟ್ ಅಸೋಸಿಯೇಶನ್ ಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಲು ರೇಡಿಯನ್ಸ್ ಅಸೋಸಿಯೇಶನ್ ನ ಮುಖ್ಯಸ್ಥರು ಫ್ಲಾಟ್ ಗೆ ಆಗಮಿಸಿದ್ದರು.

ಆಗ ಈ ಬಿಜೆಪಿ ಕಾರ್ಯಕರ್ತ ತನ್ನಿಂದಾದ ಪಾಪಕ್ಕೆ ಪಶ್ಚತ್ತಾಪ ಪಡುವ ಬದಲು ಉದ್ಧಟತನದಿಂದ ವರ್ತಿಸಿದನೆಂದು ರೆಸಿಡೆಂಟ್ ಎಸೋಸಿಯೇಶನ್ ಅದ್ಯಕ್ಷ ದೇವೇಂದ್ರ ಶಾಹಿ ಹೇಳಿದರು. ಕೂಡಲೇ ಚಪ್ಪಲಿ ತೆಗೆದ ಯುವತಿ ಬಿಜೆಪಿ ಕಾರ್ಯಕರ್ತನಿಗೆ ಬಾರಿಸ ತೊಡಗಿದರು. ಬಳಿಕ ಆತ ಕ್ಷಮೆ ಯಾಚಿಸಿದನು. ನಂತರ ಪೋಲೀಸರು ಸ್ಥಳಕ್ಕೆ ಆಗಮಿಸಿದರೂ ಕ್ಷಮೆ ಕೇಳಿದ ಕಾರಣ ಕೇಸು ದಾಖಲಿಸಲಿಲ್ಲ. ಆದರೆ ಬಿಜೆಪಿಯ ವರ್ಚಸ್ಸಿಗೆ ಕುಂದುಂಟಾಗಿದ್ದರಿಂದ ಈತನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಶಾಸಕ ರಾಜ್ ಕುಮಾರ್ ತಿಳಿಸಿದ್ದಾರೆ. ಈ ಹಿಂದೆ ಕುಡಿದ ಮತ್ತಿನಲ್ಲಿ ಅವಾಚ್ಯವಾಗಿ ಬೈದದ್ದಕ್ಕಾಗಿ ಅಶ್ವಿನಿ ಆರೋರನ ಮೇಲೆ ಹಲ್ಲೆ ಮಾಡಲಾಗಿತ್ತು.

Leave a Reply