ಮಗಳನ್ನು ಚುಡಾಯಿಸಿದ್ದನ್ನು ವಿರೋಧಿಸಿದ್ದಕ್ಕೆ ದೆಹಲಿಯಲ್ಲಿ ತಂದೆಯ ಕೊಲೆ ಹಾಗೂ ಸಹೋದರನಿಗೆ ಗಂಭೀರ ಗಾಯವಾದ ಬಗ್ಗೆ ವರದಿಯಾಗಿದೆ.
ದೆಹಲಿಯಲ್ಲಿ ಹುಡುಗಿಯೋರ್ವಳನ್ನು (22) ಚಿಕಿತ್ಸೆಯ ಬಳಿಕ ತಡ ರಾತ್ರಿ ಆಸ್ಪತ್ರೆಯಿಂದ ಮರಳುತ್ತಿದ್ದಾಗ‌ ಅವಳ ಜತೆ ಚುಡಾವಣೆ ಹಾಗೂ ಅನುಚಿತ ಕಾಮೆಂಟ್ ಗಳ ವಿರೋಧ ಮಾಡಿದ್ದಕ್ಕೆ ಅವಳ ತಂದೆ (51)ಯ ಕೊಲೆ ಮಾಡಲಾಗಿದ್ದು,ಸಹೋದರನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ.
ವರದಿಗಳ ಪ್ರಕಾರ ಮಗಳನ್ನು ಮನೆಗೆ ತಲುಪಿಸಿದ ನಂತರ ತಂದೆ-ಮಗ ಆರೋಪಿಗಳ ತಂದೆಗೆ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಅವರ ಮೇಲೆ ದಾಳಿ ಮಾಡಲಾಗಿದೆ.ಈ ಪ್ರಕರಣದಲ್ಲಿ ನೆರೆಯ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ.

ಈ ಘಟನೆಯ ಸಮಯದಲ್ಲಿ ಅಲ್ಲಿ ಸುತ್ತಮುತ್ತ ಅನೇಕ ಜನರಿದ್ದು, ಯಾರೂ ಅವರ ಸಹಾಯಕ್ಕೆ ಬಂದಿಲ್ಲ ಎಂಬುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಬಲಿಯಾದವರ ಕುಟುಂಬವು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದೆ. ಈ ಪ್ರಕರಣವನ್ನು ನೋಂದಾಯಿಸಿ ಪೊಲೀಸರು ನಾಲ್ಕು ಹುಡುಗರನ್ನು ಬಂಧಿಸಿದ್ದಾರೆ. ಅವುಗಳಲ್ಲಿ, ಮೊಹಮ್ಮದ್ ಆಲಂ ಮತ್ತು ಜಹೀರ್ ಖಾನ್ ನೆರೆಹೊರೆಯ ನಿವಾಸಿಗಳು.

 

Leave a Reply