ನೆಟ್ಟೂರು: ಮದುವೆ ಹಾಲ್ ಗೆ ಆಹಾರ ತಲುಪಿಸದೆ ಮದುವೆ ಮನೆಯವರಿಗೆ ಪಂಗನಾಮ ಹಾಕಿದ ಘಟನೆ ಕೇರಳದಲ್ಲಿ ಭಾನುವಾರ ನಡೆದಿದೆ.

ಪಾಣಂಗಾಡ್ ಮೆಮೋರಿಯಲ್ ಹಾಲ್ ನಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ವಧುವಿನ ಕಡೆಯಿಂದ ಮುಂಗಡ ಐವತ್ತು ಸಾವಿರ ರೂಪಾಯಿ ಪಡೆದು ಕ್ಯಾಟರಿಂಗ್ ವ್ಯವಸ್ತೆಗೆ ಸೈಜು ಎಂಬಾತ ಒಪ್ಪಿಕೊಂಡು ತಲೆ ಮರೆಸಿಕೊಂಡಿದ್ದ.
ಇದನ್ನು ತಿಳಿದ ವಧುವಿನ ಮಾತಾಪಿತರು ಪ್ರಜ್ಞಾಹೀನರಾದರು.

ಹನ್ನೊಂದು ಗಂಟೆಯಾದರೂ ಹಾಲ್‍ಗೆ ಆಹಾರ ತಲುಪದ ಬಗ್ಗೆ ಕಂಗಾಲಾದ ಮದುವೆ ಮನೆಯವರು  ಆತನ ಸಹಾಯಕರನ್ನು ಸಂರ್ಕಿಸಿದಾಗ ಹಿಂದಿನ ದಿನ ತರಕಾರಿ ಸಿದ್ಧಪಡಿಸಲು ಹೇಳಿದ್ದನೇ ಹೊರತು ಬೇರೇನೂ ನಮಗೆ ತಿಳಿದಿಲ್ಲ ಎಂದು ಹೇಳಿದರು. ವಿಷಯ ತಿಳಿದ ಪಾಣಂಗಾಡ್ ಸೆಂಟ್ರಲ್ ರೆಸಿಡೆಂಟ್ ಅಸೋಸಿಯೇಶನ್ ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಿ ಪಕ್ಕದ ಹೋಟೇಲುಗಳಿಂದ ಆಹಾರ ವ್ಯವಸ್ಥೆ ಮಾಡಿದರು. ವರನ ಮನೆಯವರ ಸಹಕಾರವೂ ಇಲ್ಲಿ ಪ್ರಶಂಸನೀಯವಾಗಿತ್ತು.  ವಂಚಕನ ವಿರುದ್ದ ಹತ್ತು ಲಕ್ಷ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ.

Leave a Reply