ವಿಜಯವಾಡ: ಫೇಸ್‍ಬುಕ್ನಲ್ಲಿ ಪರಿಚಯವಾದ ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಮಹಿಳೆ ಪೋಲೀಸರ ಬಲೆಗೆ ಬಿದ್ದಿದ್ದಾಳೆ. ವಿಜಯವಾಡ ಜಿಲ್ಲೆಯ ಯಮಕ್ ಶಂಕರ್ ರಾವ್ ಎಂಬಾತನನ್ನು ಪತ್ನಿ ಸರಸ್ವತಿ ಪ್ರಿಯಕರ ಶಿವನೊಂದಿಗೆ ಸೇರಿ ಕೊಂದು ಹಾಕಿದ್ದಾರೆ.

ತನ್ನ ಕಾಲೇಜು ಸಹಪಾಟಿ ಶಿವ ಜೊತೆ ಕಳೆದ ಒಂದು ವರ್ಷದಿಂದ ಸರಸ್ವತಿ ಸಂಪರ್ಕ ಹೊಂದಿದ್ದಳು. ವಿವಾಹದ ಬಳಿಕವೂ ಅವರ ಸಂಬಂಧ ಮುಂದುವರಿದಿತ್ತು. ಶಿವನೊಂದಿಗೆ ಜೀವಿಸಲು ಪತಿ ತಡೆಯಾಗುತ್ತಿದ್ದಾನೆಂದು ತೋಚಿದಾಗ ಈರ್ವರೂ ಸೇರಿ ಕೊಂದರು.

ಪತಿ ಪತ್ನಿ ಜೊತೆಯಾಗಿ ಬೈಕಲ್ಲಿ ಸಂಚರಿಸುತ್ತಿರುವಾಗ ಮೂತ್ರ ಶಂಕೆಗೆಂದು ನಿರ್ಜನ ಸ್ಥಳದಲ್ಲಿ ಬೈಕ್ ನಿಲ್ಲಿಸಲು ಹೇಳಿದಳು. ಆಗ ಶಸ್ತ್ರಧಾರಿಗಳಾಗಿ ಅಟೋದಲ್ಲಿ ಬಂದ ಮೂವರು ಯಮಶಂಕರ್ ರಾವ್ ನನ್ನು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಕೊಂದರು. ಬಳಿಕ ದರೋಡೆಯ ಪ್ರಯತ್ನವಿದು ಎಂದು ತನ್ನ ಕೈಯ ಬಳೆಗಳನ್ನೆಲಾ ಅವಳು ಒಡೆದು ಹಾಕಿದಳು. ಆದರೆ ಸರಸ್ವತಿಯ ಮಾತಿನಲ್ಲಿ ಅನುಮಾನ ಕಂಡು ಬಂದಾಗ ಪೋಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು. ಈ ಹಿಂದೆ ಎರಡು ಬಾರಿ ಹತ್ಯಾ ಯತ್ನ ನಡೆಸಿದರೂ ಯಶಸ್ವಿಯಾಗಿರಲಿಲ್ಲ.

Leave a Reply