ಕೊಚ್ಚಿನ್: ಇಲ್ಲಿನ ಪೆರಂಬಾವೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಇಂದು ಬೆಳಿಗ್ಗೆ ಹತ್ತುಗಂಟೆಯ ವೇಳೆ ಕತ್ತು ಸೀಳಿ ಕೊಲೆಗೈಯ್ಯಲಾಗಿದೆ. ತನ್ನ ಅಜ್ಜಿಯ ಕತ್ತಿನಿಂದ ಸರವೊಂದನ್ನು ಕಳ್ಳನು ಲಪಟಾಯಿಸುವಾಗ ತಡೆಯಲು ಹೋದ ನಿಮಿಶ(19) ಎಂಬ ಈಕೆಯನ್ನು ಕೊಲ್ಲಲಾಗಿದೆ.
ಮುರ್ಶಿದಾಬಾದ್ ನಿವಾಸಿ ಬಿಜು ಎಂಬಾತ ಮನೆಗೆ ನುಗ್ಗಿ ಅಜ್ಜಿಯ ಕತ್ತಿನಿಂದ ಸರವನ್ನು ಕೀಳುತ್ತಿರುವುದನ್ನು ನೋಡಿದ ನಿಮಿಶಾ ಅದನ್ನು ತಡೆಯಲು ಮುಂದಾದಾಗ ಆಕೆಯ ಕತ್ತು ಸೀಳಿದನು. ಘಟನೆ ಅರಿತು ನಿಮಿಶಾಳ ಸಹಾಯಕ್ಕೆ ಬಂದ ಸೋದರ ಸಂಬಂಧಿ ಎಲಿಯಾಸ್ ಮೇಲೆಯೂ ಈತ ಹಲ್ಲೆ ಗೈದಿದ್ದಾನೆ. ಆತನಿಗೂ ತೀವ್ರ ಗಾಯಗಳಾಗಿವೆ.
ನಿಮಿಶಾಳನ್ನು ತಕ್ಷಣ ಆಸ್ಪತ್ರೆಗೆ ಸೆರಿಸುವಷ್ಟರಲ್ಲಿ ಮೃತಳಾಗಿದ್ದಾಳೆ. ಆರೋಪಿ ಬಿಜುವನ್ನು ಸಾರ್ವಜನಿಕರು ಸೆರೆ ಹಿಡಿದು ಪೋಲೀಸರಿಗೆ ಒಪ್ಪಿಸಿದರು.
ಆರೋಪಿ ಬಿಜು ಹಿಂದೆ ಪೆರಂಬಾವೂರಿನ ಪ್ಲೈವುಡ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ಬಳಿಕ ಆತನನ್ನು ಅಲ್ಲಿಂದ ಕೆಲಸದಿಂದ ವಜಾ ಮಾಡಲಾಗಿತ್ತು. ಆ ಬಳಿಕ ಅಲ್ಲಿಲ್ಲಿ ಅಲೆದಾಟ ನಡೆಸುತ್ತಿದ್ದ ಈತ ಬೆಳಿಗ್ಗೆ ನಿಮಿಶಾಳ ಮನೆಯನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದ.
Photo courtesy : Times of India