ಹಿಂದೂಗಳ ಸಂಪೂರ್ಣ ಮತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿಯು ಅಲ್ಪಸಂಖ್ಯಾತರ ಮತಗಳ ವಿಭಜನೆಯಿಂದಾಗಿ ಕರ್ನಾಟಕದಲ್ಲಿ ಸಂಪೂರ್ಣ ವಿಜಯಿಯಾಗಲಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ತಿಳಿಸಿದ್ದಾರೆ.
ತ್ರಿವಳಿ ತಲಾಕ್ ನಿಷೇಧದ ಪರಿಣಾಮವಾಗಿ ಬಿಜೆಪಿಗೆ ಮುಸ್ಲಿಮ್ ಮಹಿಳೆಯರ ಮತಗಳು ಸುಲಭವಾಗಿ ಮತಗಟ್ಟೆ ಸೇರಲಿದ್ದು ಅವರ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಈಗಾಗಲೇ ಕೇಂದ್ರ ಸರಕಾರವು ಸಫಲತೆಯನ್ನು ಸಾಧಿಸಿದೆ.
ಮಾತ್ರವಲ್ಲ ಶಿಯಾ ಹಾಗೂ ಭೌರಾ ಮುಸ್ಲಿಮರ ಮತಗಳೂ ಕೂಡ ಬಿಜೆಪಿಗೆ ಲಭಿಸುವವು.
ಅಲ್ಪಸಂಖ್ಯಾತರಲ್ಲಿ ಪುರುಷರ ಮತಗಳು ಕಾಂಗ್ರಸ್ ಮತಗಟ್ಟೆಗೆ ಸೇರಿದರೂ ಮಹಿಳೆಯರ ಮತಗಳು ನಮಗೇ ಸಿಗಲಿವೆ. ಒಟ್ಟು 130 ಸೀಟುಗಳಲ್ಲಿ 125 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದವರು ತಿಳಿಸಿದ್ದಾರೆ.