ಮಂಗಳೂರು: ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ವು ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಸಲು ಉದ್ಧೇಶಿಸಿರುವ ರಕ್ತದಾನ ಶಿಬಿರದ ಅಂಗವಾಗಿ ಲಯನ್ಸ್ ಕ್ಲಬ್ (ರಿ) ಗುರುಪುರ ಕೈಕಂಬ ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಇದೇ ಬರುವ ತಾರೀಕು 05.08.2018 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ AK ರಿಯಾಝ್,LN ಜೇಮ್ಸ್ ಮೆಂಡ,LN ಯು.ಪಿ.ಇಬ್ರಾಹಿಂ,LN ಡಾ|| ಇ.ಕೆ.ಎ ಸಿದ್ದೀಕ್,LN ಮುಸ್ತಫಾ ಅಡ್ಡೂರು ದೆಮ್ಮಲೆ,ಟಿ.ಸೈಯದ್ ತೋಕೂರು,ಎಂ.ಎ.ಅಹ್ಮದ್ ಬಾವ,LN ಜಾಪ್ರರಿಯನ್ ತಾವ್ರೂ,ಶಾಫಿ ಮಾಣಿ,ಹಬೀಬ್ ಕಟ್ಟಪುಣಿ,ಶ್ರೀಮತಿ ರುಕಿಯಾ,ನೌಫಲ್ ಗೋಳಿಪಡ್ಪು,ಎಂ ಷರೀಫ್,ಸಿದ್ದೀಕ್ ಕೆಳಗಿನಕೆರೆ,ಜಬ್ಬಾರ್ ಎಸ್ ಎಚ್,ಹನೀಫ್ ಕಾಂಜಿಲಕೋಡಿ,ಮನ್ಸೂರ್ ಮಣ್ಣಗುಡ್ಡೆ,ಅಶ್ರಫ್ ನಡುಗುಡ್ಡೆ,ಬಶೀರ್ ಸಾಗರ್,ಅಬ್ದುಲ್ ರಹಿಮಾನ್,ಕಮಲ್ ಕಾಂಜಿಲಕೋಡಿ,ಇಬ್ರಾಹಿಂ ಅಳಿಕೆ,ಜಲೀಲ್,ಪರ್ವೀಝ್ ಮುಂತಾದ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಕಟಣೆ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ)
ಮಾಧ್ಯಮ ವಿಭಾಗ

Leave a Reply