ನವದೆಹಲಿ: ಬುರಾ ನ ಮಾನೋ ಹೋಲಿ ಹೈ…ಬೇಸರ ಮಾಡಬೇಡಿ ಇವತ್ತು ಹೋಲಿ ಎನ್ನುತ್ತಾ ಬಣ್ಣ ಎರಚುವ ಹಬ್ಬ ಹೋಲಿ ಹಬ್ಬ. ಆದರೆ ಕೆಲವೊಮ್ಮೆ ಇದರಿಂದಾಗಿ ವಾತಾವರಣ ಬಿಗಡಾಯಿಸಿ ಕೋಮುಗಲಭೆಗಳೂ ಆದದ್ದುಂಟು.

ರಾಷ್ಟ್ರೀಯ ರಾಜಧಾನಿಯಲ್ಲಿ ಹೋಲಿಯ ದಿನದಂದು ನೀರಿನ ಬಲೂನ್ ಎಸೆದದ್ದಕ್ಕೆ ಐವತ್ತು ಬಾರಿ ಯುವಕನೋರ್ವನಿಗೆ ಚೂರಿಯಲ್ಲಿ ಬರ್ಬರವಾಗಿ ಇರಿದ ಘಟನೆ ನಿನ್ನೆ ನಡೆದಿದೆ.

ದಕ್ಷಿಣ ದೆಹಲಿಯ ಖಾನ್ಪುರ್ ಪ್ರದೇಶದ ಸಂಜೆ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಆಶಿಶ್ (20) ಎಂದು ಗುರುತಿಸಲಾಗಿದೆ. ಈ ಯುವಕ ಜಿಮ್ ನಿಂದ ಮನೆಗೆ ತೆರಳುತ್ತಿದ್ದ ಎನ್ನಲಾಗಿದೆ.

10 ದ್ವಿಚಕ್ರ ವಾಹನದಲ್ಲಿ ಬಂದ ಬೈಕ್ ಗ್ಯಾಂಗ್ ಆಶಿಶ್ ನನ್ನು ಸುತ್ತುವರಿದು ಇರಿದ ದೃಶ್ಯವು ಹತ್ತಿರದ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ಆಘಾತಕಾರಿ ವಿಷಯವೆಂದರೆ, ಈ ಘಟನೆ ಸಾರ್ವಜನಿಕರ ಮುಂದೆಯೇ ನಡೆದಿದ್ದು, ಯಾರೊಬ್ಬರೂ ಆತನ ರಕ್ಷಣೆಗೆ ಮುಂದೆ ಬಂದಿಲ್ಲ. ಹಲ್ಲೆಕೋರರು ಹೋದ ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರ ಪ್ರಕಾರ, ಆಶಿಶ್ನ ಸ್ಥಿತಿ ಬಹಳ ಗಂಭೀರವಾಗಿದ್ದು, ಸರಿಸುಮಾರು 50 ಬಾರಿ ಇರಿಯಲಾಗಿದೆ ಎಂದು ಅಂದಾಜಿಸಲಾಗಿದೆ.

ಈ ಮಾರಕ ದಾಳಿಯ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಾಟರ್ ಬಲೂನ್ ಎಸೆದ ಹುಡುಗನನ್ನು ಇಬ್ಬರು ಹಿಡಿದು ಥಳಿಸುವಾಗ ಆಶಿಶ್ ಆ ಹುಡುಗನನ್ನು ಅವರಿಂದ ಕಾಪಾಡಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲಿ ಅವರ ಜೊತೆ ಆಶಿಷ್ ಕಾದಾಡಿದ್ದನು. ಅದರ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಎನ್ಡಿಟಿವಿ ವರದಿ ಮಾಡಿದೆ.

– ಸಾಂದರ್ಭಿಕ ಚಿತ್ರ)

Leave a Reply