ಮೋದಿ ಸರಕಾರದ ವಿರುದ್ದ ಅವಿಶ್ವಾಸ ಗೊತ್ತವಳಿ ಹೊರಡಿಸಲು ಹಿಂಜರಿಯಲಾರೆನೆಂದು ಆಂದ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಬಜೆಟ್ನಲ್ಲಿ ಆಂದ್ರಪ್ರದೇಶವನ್ನು ನಿರ್ಲಕ್ಷಿಸಿದ್ದಕ್ಕಾಗಿ ಎನ್ಡಿಎ ಮೈತ್ರಕೂಟದ ತೆಲುಗು ದೇಶಮ್ ಈ ರೀತಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಕಳೆದ ನಾಲ್ಕು ವರ್ಷಗಳಿಂದ ಆಂದ್ರಕ್ಕೆ ಏನನ್ನೂ ನೀಡಿಲ್ಲ. ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವಾಗ ನೋಡಿ ಸುಮ್ಮನಿರಲು ಸಾದ್ಯವಿಲ್ಲ. ರಾಜ್ಯಕ್ಕೆ ವಿಶೇಷ ಗೌರವ ಅಥವಾ ವಿಶೇಷ ಪ್ಯಾಕೇಜ್ ನೀಡಬೇಕೆಂದೂ ಅವರು ಹೇಳಿದ್ದರು.
ಟಿಡಿಪಿ ಅವಿಶ್ವಾಸ ಗೊತ್ತುವಳಿ ತರಲು ಸಿದ್ದವಾಗದಿದ್ದರೆ ನಾವು ಅದಕ್ಕೆ ಸಿದ್ದರಿದ್ದೇವೆಂದು ವೈ ಎಸ್ ಆರ್ ಪಕ್ಷದ ಜಗನ್ಮೋಹನ್ ರೆಡ್ಡಿ ತಿಳಿಸಿದರು.