ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದು ಬೇಡ, ಕಾನ್ವೆಂಟ್ ಶಾಲೆಗೆ ಸೇರಿಸಬೇಕು ಎಂಬ ವಿಷಯದಲ್ಲಿ ಪತಿ ಪತ್ನಿಯರಿಬ್ಬರ ನಡುವೆ ಜಗಳ ಸಂಭವಿಸಿದ್ದು, ಕೋಪಗೊಂಡ ಪತ್ನಿ ತನ್ನ ಮೂವರು ಮಕ್ಕಳ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ವರದಿಯಾಗಿದೆ.

ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ(25) ತನ್ನ ಮೂವರು ಮಕ್ಕಳಾದ ಜೀವನ್(7), ಚಂದನ(5) ಹಾಗೂ ಅಕ್ಷಯ್(3) ಮೃತ ದುರ್ದೈವಿಗಳು.

ನಕ್ಕಲಹಳ್ಳಿ ಮಂಜುನಾಥ ಪೇಂಟಿಂಗ್ ಮತ್ತು ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ಮೊದಲನೇ ಮಗ ಜೀವನ್ ನನ್ನ ಊರ ಪಕ್ಕದಲ್ಲಿದ್ದ ಖಾಸಗಿ ಸ್ಕೂಲ್ ಗೆ ಸೇರಿಸಿದ್ದರು. ಈ ವರ್ಷ ಎರಡನೇ ಮಗ ಚಂದನ್ ನನ್ನು ಶಾಲೆಗೆ ಸೇರಿಸುವ ವಿಷಯದಲ್ಲಿ ದಂಪತಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು. ಬರುವ ವರ್ಷ ಮೂವರನ್ನು ಸೇರಿಸಿದರೆ ಜೀವನ ನಿರ್ವಹಣೆ ಕಷ್ಟ ಆಗಬಹುದು. ಆದ್ದರಿಂದ ಮೂವರು ಮಕ್ಕಳನ್ನೂ ಒಂದೇ ಕಡೆ ಸರಕಾರಿ ಶಾಲೆಗೆ ಸೇರಿಸೋಣ ಎಂದಿದ್ದೆ ಎಂದು ಈ ಬಗ್ಗೆ ಮಂಜುನಾಥ್ ಹೇಳಿದ್ದಾರೆ. ಆದರೆ ರೊಚ್ಚಿಗೆದ್ದ ಹೆಂಡತಿ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Leave a Reply