ಮುಂಬೈ: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಶಿವಸೇನೆ ಹೇಳಿದೆ. ಈಗ ಕರ್ನಾಟಕದಲ್ಲಿ  ಬಿಸಿಗಾಳಿಯಿದೆ. ಅದು ಬದಲಾದರೆ ಕಾಂಗ್ರೆಸ್ ಮುನ್ನಡೆ ಗಳಿಸುವುದು. ಜನರು ಈಗ ರಾಹುಲ್ ಮಾತನ್ನು ಆಲಿಸತೊಡಗಿದ್ದಾರೆಂದು ಶಿವಸೇನಾ ನೇತಾರ ಸಂಜಯ್ ರಾವುತ್ ಹೇಳಿದ್ದಾರೆ.

ಕೇಂದ್ರ ಆಡಳಿತವು ಈಗ ಕರ್ನಾಟಕಕ್ಕೆ ಕೇಂದ್ರೀಕೃತವಾಗಿದೆ ಎಂದು ಕೇಂದ್ರ ಸರಕಾರವನ್ನು ವಿಮರ್ಶಿಸಿದ ಅವರು, ಎಲ್ಲಿ ಚುನಾವಣೆ ನಡೆಯುತ್ತದೋ ಅಲ್ಲಿ ಕೇಂದ್ರ ಸರಕಾರದ ದಂಡು ಮತ್ತು ಬಿಜೆಪಿ ಆಡಳಿತ ನಡೆಸುವ ರಾಜ್ಯಗಳ ಮುಖ್ಯ ಮಂತ್ರಿಗಳು ಪ್ರಚಾರಕ್ಕಿಳಿಯುವರು. ಹೀಗೇ ಕೇಂದ್ರ ರಾಜ್ಯದ ಆಡಳಿತವು ಪಾತಾಳಕ್ಕಿಳಿಯುವುದು. ಇವೆಲ್ಲಾ ಪ್ರಚಾರದ ಕೋಲಾಹಲಗಳಾಗಿವೆ ಮತ್ತು ಇವೆಲ್ಲವನ್ನೂ ದೇಶದ ಜನ ಗಮನಿಸುತ್ತಾರೆ ಎಂದೂ ಹೇಳಿದರು.

ತಮ್ಮ ರಾಜ್ಯಗಳಲ್ಲಿ ಬಿಸಿಗಾಳಿಗೆ ಸಿಲುಕಿ ಜನರು ಸಾಯುತ್ತಿರುವಾಗ ಯೋಗಿ ಆದಿತ್ಯನಾತ್ ಜವಾಬ್ದಾರಿ ಮರೆತು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಬಿಜೆಪಿಯ ಕೇಂದ್ರ ನಾಯಕರಿಗೆ ರಾಜ್ಯದ ನಾಯಕರ ಮೇಲೆ ನಂಬಿಕೆ ಇಲ್ಲ. ದೆಹಲಿಯಲ್ಲಿದ್ದು ಆಡಳಿತ ನಡೆಸುದಕ್ಕಿಂತ ಡಝನ್ ಗಟ್ಟಲೆ ರ‌್ಯಾಲಿಯಲ್ಲಿ ಭಾಗವಹಿಸುತ್ತಿರುವುದೇಕೆಂದು ಕೇಳಿದರು.

Leave a Reply