ಉತ್ತರ ಪ್ರದೇಶದಲ್ಲಿ ದಲಿತ ಯುವತಿಯನ್ನು ದುಷ್ಕರ್ಮಿಗಳು ಜೀವಂತ ಸುಟ್ಟು ದಹಿಸಿದ ಅಮಾನವೀಯ ಘಟನೆ ಸಂಭವಿಸಿದೆ.

ಉನ್ನಾವೋ ಜಿಲ್ಲೆಯ ಯುವತಿ ಮೋನಿ (18) ತನ್ನ ಬೈಸಿಕಲ್ ನಲ್ಲಿ ತರಕಾರಿ ಮಾರುಕಟ್ಟೆಗೆ ತೆರಳಿದ್ದಳು. ಆಗ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ.

ಸಾಂದರ್ಭಿಕ ಚಿತ್ರ

ಸಂಪೂರ್ಣ ದೇಹವನ್ನೆಲ್ಲಾ ಬೆಂಕಿ ಸುಟ್ಟಾಗ ಆಕೆ ಜೀವ ಉಳಿಸಲು ದೂರ ಓಡಿದ್ದಾಳೆ. ಆದರೆ 100 ಮೀಟರ್ ದೂರ ಓಡುತ್ತಿದ್ದಂತೆ ಆಕೆ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದೊಂದು ದ್ವೇಷ ಕೃತ್ಯವೇ ಅಥವಾ ಕೌಟುಂಬಿಕ ಕಲಹದ ಕಾರಣವಾಗಿರಬಹುದೇ ಎಂಬುದನ್ನು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಪೊಲೀಸ್ ನಿರೀಕ್ಷಕ ಸುಜಿತ್ ಕುಮಾರ್ ಪಾಂಡೆ ಘಟನಾ ಸ್ಥಳಕ್ಕೆ ಆಗಮಿಸಿದ್ದು ಯುವತಿಯ ಹೆತ್ತವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply