ಪತ್ತನತಿಟ್ಟಮ್: ಡಿ ವೈಎಫ್ಐ ನಾಯಕನೋರ್ವ ಕಾಂಗ್ರೆಸ್ ವ್ಯಕ್ತಿಗೆ ಸಾಮಾಜಿಕ ಜಾಲ ತಾಣದಲ್ಲಿ ಕೊಲೆ ಬೆದರಿಕೆ ನೀಡಿದ ಘಟನೆ ಕೇರಳದಲ್ಲಿ ನಡೆದಿದೆ.
ಇಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಓರ್ವ ಯುವ ಕಾಂಗ್ರೇಸ್ಸಿಗನ ತಲೆ ಉರುಳುವ ಎಲ್ಲಾ ಸಾದ್ಯತೆಗಳು ಕೂಡಿ ಬರುತ್ತಿದೆ ಎಂಬ ಸಂದೇಶ ಹರಡಿತ್ತು. ಇದರಿಂದ ಕಾಂಗ್ರೆಸ್ ವಲಯದಲ್ಲಿ ಆತಂಕ ಸೃಷ್ಟಿ ಆಗಿತ್ತು. ಈ ಹಿನ್ನೆಲೆಯಲ್ಲಿ ಇದರ ವಿರುದ್ದ ಕಾಂಗ್ರೆಸ್ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದಾರೆ.
ಘಟನೆ ಹೆಚ್ಚು ವಿವಾದವಾಗಿ ಸುದ್ದಿಯಾಗುತ್ತಿದ್ದಂತೆ ಸಿ.ಪಿ.ಎಮ್ ಮಧ್ಯೆ ಪ್ರವೇಶಿಸಿದಾಗ ಕಮ್ಯೂನಿಸ್ಟ್ ನೇತಾರರು ತನ್ನ ಬರಹವನ್ನು ಅಳಿಸಿ ಹಾಕಿದ್ದಾರೆ.
ಇತ್ತೀಚಿಗೆ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತುಳಿದು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಏಳು ಕಮ್ಯುನಿಸ್ಟ್ ಪರ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅದರಲ್ಲಿ ಓರ್ವ ಸಿಪಿಎಮ್ ಮುಖಂಡ ಕೂಡ ಭಾಗಿಯಾಗಿದ್ದನೆಂದು ಮಾಧ್ಯಮಗಳು ವರದಿ ಮಾಡಿವೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಜೊಸಾನ ಸಿಬ್ಬಿ ಮನೆಗೆ ಜನವರಿ 28 ರಂದು ನುಗ್ಗಿ ಗಂಡನಿಗೆ ಹೊಡೆಯಲು ಯತ್ನಿಸಿದಾಗ ತಡೆಯಲು ಬಂದ ಗರ್ಭಿಣಿ ಜೊಸಾನ ಅವರ ಹೊಟ್ಟೆಗೆ ತುಳಿದು ಈ ಕೃತ್ಯ ಎಸಗಿದ್ದರು.
ಆದರೆ ಸಿಪಿಎಮ್ ಈ ಅಪವಾದವನ್ನು ತಳ್ಳಿ ಹಾಕಿದ್ದು, ಈ ಕೃತ್ಯದಲ್ಲಿ ಪಾಲ್ಗೋಂಡವರಿಗೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದೆ