ಆನೇಕಲ್‌ : ಜನರು ತಮ್ಮ ಮದುವೆಯನ್ನು ಸ್ಮರಣೀಯಗೊಳಿಸಲು ಏನೆಲ್ಲಾ ಮಾಡುತ್ತಾರೆ. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ವಿಶಿಷ್ಟ ರೀತಿಯಲ್ಲಿ ವಿವಾಹ ನಡೆದಿದೆ. ಮದುವೆಯು ‘ಗಿರಿಜಾ ಕಲ್ಯಾಣ’ದ ಮಾದರಿಯಲ್ಲಿ ಪೌರಾಣಿಕವಾಗಿ ನಡೆದಿದೆ. ಮದುವೆಗೆ ಆಗಮಿಸಿದ್ದವರಿಗೆ ಮದುವೆ ಮನೆಯವರ ವೇಷ ಕಂಡು ಅಚ್ಚರಿಯಾಗಿದೆ.

‘ಗಿರಿಜಾ ಕಲ್ಯಾಣ’ ಸಿನಿಮಾ ಹಾಗೂ ‘ಹರ ಹರ ಮಹಾದೇವ್’ ಧಾರಾವಾಹಿಯಿಂದ ಪ್ರೇರೇಪಿತರಾಗಿ ಈ ವಿವಾಹ ನಡೆದಿದೆ ಎಂದು ಹೇಳಲಾಗಿದೆ. ಪೌರಾಣಿಕವಾಗಿ ಮದುವೆ ಮಾಡಿಕೊಳ್ಳಬೇಕೆಂಬಉದ್ದೇಶದಿಂದ ಈ ರೀತಿ ಮದುವೆ ಮಾಡಲಾಗಿದೆ.

ಬನ್ನೇರುಘಟ್ಟ ಸಮೀಪದ ವೀವರ್ಸ್‌ ಕಾಲೊನಿಯ ಪದ್ಮಾವತಿ ಮತ್ತು ವಸಂತ್‌ ಕುಮಾರ್ ಅವರು ಮಗ ಲಕ್ಷ್ಮೀ
ನಾರಾಯಣ ಮದುವೆ ಅವರ ಬಯಕೆಯಂತೆ ಈ ರೀತಿ ನಡೆದಿದೆ. ಅವರು ಅರ್ಚಕ ವೃತ್ತಿ ನಡೆಸುತ್ತಿದ್ದ ಅವರು ನಿತ್ಯ ದೇವರ ಪೂಜೆ ನಡೆಸುತ್ತಿದ್ದರು. ಈ ವಿಶಿಷ್ಟ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿದೆ.

Leave a Reply