ಇಂದೋರ್: ಹೆತ್ತವರೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಭಯಾನಕ ಘಟನೆ ಇಲ್ಲಿನ ರಾಜ್‍ವಾಡಾ ಕೋಟೆಯ ಹೊರವಲಯದಲ್ಲಿ ನಡೆದಿದೆ.

ಬಲೂನ್ ವ್ಯಾಪಾರಿ ದಂಪತಿಗಳ 8 ತಿಂಗಳ ಮಗುವನ್ನು ಅವರ ಕುಟುಂಬದ ಪರಿಚಿತ ವ್ಯಕ್ತಿ ನವೀನ್ (21) ಹೊತ್ತೊಯ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ನಿದ್ರಿಸುತ್ತಿದ್ದ ಮಗುವನ್ನು ಶುಕ್ರವಾರ ಮುಂಜಾನೆ 200 ಕಿಮೀ ದೂರದೂರ ವಾಣಿಜ್ಯ ಸಂಕೀರ್ಣಕ್ಕೆ ಹೊತ್ತುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಮಗುವಿನ ಶವ ಶುಕ್ರವಾರ ಪತ್ತೆಯಾಗಿತ್ತು.

ಮಗುವಿನ ರಕ್ತದ ಕಲೆಯಿರುವ ಬಟ್ಟೆ ಮತ್ತು ಸೈಕಲ್‍ನ್ನು ಪೊಲೀಸರು ವಶಪಡಿಸಿಕೊಂಡಿದ್ದು
ಮಗುವಿನ ಗುಪ್ತಾಂಗ ಮತ್ತು ತಲೆಯಲ್ಲಿ ಗಾಯದ ಕಲೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣವನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ತೀವ್ರವಾಗಿ ಖಂಡಿಸಿದ್ದು, ನಮ್ಮ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಆತನಿಗೆ ಶೀಘ್ರವೇ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.

Leave a Reply