ಜೋಧ್ಪುರ: ರಾಜಸ್ತಾನದ ವಿಧಾನಸಭೆ ಕಟ್ಟಡದಲ್ಲಿ ಭೂತ ಚೇಷ್ಟೆ ಇದೆಯೆಂದೂ ಅದನ್ನು ತೊಲಗಿಸಲು ಸಭೆ ಕರೆಯಬೇಕೆಂದು ಕೆಲ ಶಾಸಕರು ರಂಗಕ್ಕಿಳಿದಿದ್ದಾರೆ.
ಕಳೆದ ಆರು ತಿಂಗಳೊಳಗೆ ಕೀರ್ತಿಕುಮಾರಿ ಮತ್ತು ಕಲ್ಯಾಣ್ ಸಿಂಗ್ ಎಂಬ ಈರ್ವರು ಶಾಸಕರು ಸಾವೀಗೀಡಾದ ಕಾರಣ ಇಂತಹದ್ದೊಂದು ಚರ್ಚೆ ಶುರುವಾಗಿದೆ.
ಬಿಜೆಪಿ ಶಾಸಕರಾದ ಹಬೀಬುರ್ರಹ್ಮಾನ್ ಕಲುಲಾಲ್ ಗುರ್ಜರ್ರವರು ಈ ವಿಷಯವನ್ನು ಮುಖ್ಯಮಂತ್ರಿ ವಸುಂಧರಾ ರಾಜೆಯವರಿಗೆ ತಿಳಿಸಿದ್ದಾರೆ.
ಇದು ಮೂಢನಂಬಿಕೆ ನಂಬಿಕೆ ವ್ಯಾಪಿಸಲು ಶ್ರಮಿಸಲಾಗುತ್ತಿದೆಯೆಂದು ಆರೋಪಿಸಿ ಕೆಲ ಸಂಸದರು ಇದರ ವಿರುದ್ಧ ರಂಗಕ್ಕಿಳಿದಿದ್ದಾರೆ.
ವಿಧಾನ ಸಭೆಯಲ್ಲಿ ಭೂತ ಭಾದೆಯಿದೆಯೆಂಬುದು ಆಧಾರ ರಹಿತವೆಂದು ಕೆಲ ಬಿಜೆಪಿ ಶಾಸಕರೂ ಹೇಳಿದ್ದಾರೆ.
ಜ್ಯೋತಿ ನಗರದಲ್ಲಿ 16.96 ಎಕರೆ ಸ್ಥಳದಲ್ಲಿ ರಾಜಸ್ತಾನ ವಿಧಾನಸಭೆಯ ಸಮಚ್ಚಯವಿದೆ. ದೇಶದ ಅತ್ಯಾಧುನಿಕ ವಿಧಾನಸಭಾ ಕಟ್ಟಡಗಳಲ್ಲಿ ಇದೂ ಒಂದು.