ಹಜ್ಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂಬ ಶಾಸಕ ಝಮೀರ್ ಅಹ್ಮದ್ ರವರ ಹೇಳಿಕೆ ವಿವಾದಕ್ಕೀಡಾಗಿದ್ದು, ಇದೀಗ ಬಿಜೆಪಿ ಅದರ ವಿರುದ್ಧ ತಗಾದೆ ಎತ್ತಿದೆ.

“ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ, ಆತ ಲಕ್ಷಾಂತರ ಹಿಂದೂಗಳ ಮತಾಂತರ ಮಾಡಿದ್ದಾನೆ. ಕೊಲೆ ಮಾಡಿದ್ದಾನೆ. ಆದ್ದರಿಂದ ಆ ಹೆಸರು ಇಡುವ ಮೂಲಕ ಆ ಭವನವನ್ನು ಅವಮಾನಿಸಬಾರದು.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಜ್ಜ್ ಭವನಕ್ಕೆ ₹50 ಕೋಟಿ ಅನುದಾನ ನೀಡಲಾಗಿತ್ತು, ಅದು ನಿಜವಾದ ಅಭಿವೃದ್ಧಿ ಎಂದು ಬಿಜೆಪಿ ಶಾಸಕ ಆರ್‌.ಅಶೋಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಎಚ್ಚರಿಸಿದೆ.

ಈ ಹಿಂದೆ ಟಿಪ್ಪು ಸುಲ್ತಾನ್ ಜಯಂತಿಯ ಬಗ್ಗೆ ರಾಜ್ಯದಾದ್ಯಂತ ವಿವಾದ ಭುಗಿಲೆದ್ದು, ವಿವಾದಕ್ಕೆ ಕಾರಣವಾಗಿತ್ತು. ಟಿಪ್ಪು ಸುಲ್ತಾನ್ ಮತ್ತು ಹಜ್ಜ್ ಇವೆರಡಕ್ಕೂ ಇರುವ ಸಂಬಂಧವೇನಾದರೂ ಏನು?

Leave a Reply