ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಬಟ್ಟೆ ಒಣಗಿಸಲು ಮನೆಯ ಟೆರೇಸ್ ಮೇಲೆ ಹೋದಾಗ ಅಪರಿಚಿತ ಮಗುವಿನ ರುಂಡ ನೋಡಿ ಕಿರುಚಿಕೊಂಡಿದ್ದು, ಇದನ್ನ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚಂದ್ರಗ್ರಹಣದ ನಿಟ್ಟಿನಲ್ಲಿ ಈ ಮಗುವನ್ನು ಬಲಿ ನೀಡಿರಬಹುದು ಎಂದು ಶಂಕಿಸಲಾಗಿದೆ.

ಮಹಿಳೆಯ ಅಳಿಯನಾದ ಕ್ಯಾಬ್ ಚಾಲಕ ರಾಜಶೇಖರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನಂತರ ಪೊಲೀಸ್ ಬಾಯಿ ನೆರೆಮನೆಯ ಡಸ್ಟ್ ಬಳಿ ಕೊಂಡೊಯ್ದ ನಂತರ ಆ ಮನೆಯ ನರಹರಿ ಹಾಗೂ ರಂಜಿತ್ ಎಂಬಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಆಗಾಗ ಮಾಟ ಮಂತ್ರಕ್ಕಾಗಿ ಪೂಜೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮಗು ಯಾರದ್ದೆಂದು ಪತ್ತೆಯಾಗಿಲ್ಲ. ಮಗುವಿನ ದೇಹಕ್ಕಾಗಿ ಹುಡುಕಾಟ ನಡೆದಿದೆ.

ಹೈದರಾಬಾದ್‍ನ ಚಿಲುಕಾ ನಗರದಲ್ಲಿ ಈ ಘಟನೆ ನಡೆದಿದೆ.

Leave a Reply