ಬೈಕ್ ಹೋಗುತ್ತಿದ್ದ ವ್ಯಕ್ತಿಗೆ ತೀವ್ರ ಹೃದಯಾಘಾತವಾಗಿದ್ದು, ಹೋಮ್ ಗಾರ್ಡ್ ಗಳಿಬ್ಬರು ಆತನನ್ನು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಈ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯುತ್ತಿದೆ.

ಬುಧವಾರ ಸುಮಾರು 12.30ರ ವೇಳೆಗೆ ವ್ಯಕ್ತಿಯೊಬ್ಬರು ಧುಲ್‍ಪೇಟೆಯಿಂದ ಟಾಡ್ಬಂಡ್ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಹೃದಯಾಘಾತದಿಂದ ಪುರಾಣಪುಲ್‍ನಲ್ಲಿ ಸ್ಕೂಟರಿಂದ ಕೆಳಗೆ ಕುಸಿದುಬಿದ್ದರು. ಕೂಡಲೇ ಇಬ್ಬರು ಹೋಂಗಾರ್ಡ್ಸ್ ಆದ ಚಂದನ್ ಸಿಂಗ್ ಮತ್ತು ಇನಾಯತ್-ಉಲ್ಲಾ ಖಾನ್ ಖದ್ರಿ ಸ್ಥಳಕ್ಕೆ ದೌಡಾಯಿಸಿ ಆ ವ್ಯಕ್ತಿಗೆ ಕೂಡಲೇ ಸಿಪಿಆರ್ ಮಾಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.
ಇದರಿಂದಾಗಿ ಅವರ ಪ್ರಾಣವುಳಿದಿದೆ. ನಂತರ ಆಂಬುಲೆನ್ಸ್ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಕೂಡ ಹೋಂಗಾರ್ಡ್ಸ್ ಗಳ ಸಮಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.
ವಿಡಿಯೋ ವೈರಲ್ ಆಗಿದ್ದು, ಅವರಿಗೆ ಎಲ್ಲರೂ ಶಹಬ್ಬಾಸ್ ಹೇಳುತ್ತಿದ್ದಾರೆ.

ಇದರಲ್ಲಿ ನಮ್ಮದೇನೂ ಇಲ್ಲ ಎಲ್ಲವೂ ದೇವರ ಮಹಿಮೆ ಎನ್ನುತ್ತಾರೆ ಇನಾಯತುಲ್ಲಾ ಮತ್ತು ಚಂದನ್..ಮಾನವೀಯತೆಗೆ ಧರ್ಮ ಜಾತಿ ಎಂಬುದಿಲ್ಲ.

Leave a Reply