ಸಮೃದ್ಧ ಸಾಮರಸ್ಯದ ಶ್ರೀಮಂತ ಸಂಪ್ರದಾಯಕ್ಕೆ ಮಾದರಿಯಾಗುವಂತಹ, ಧಾರ್ಮಿಕ ಸೌಹಾರ್ದ ಮೆರೆಯುವ ಹಲವಾರು ಕಾರ್ಯಗಳಿಗೆ ನಮ್ಮ ರಾಜ್ಯ ಕರ್ನಾಟಕ ಸಾಕ್ಷ್ಯವಹಿಸಿದೆ

ಹನುಮಸಾಗರದಲ್ಲಿ ಇಂದು ಜಾಮಿಯಾ ಮಸೀದಿಯ ಆವರಣದಲ್ಲಿ ಹಿಂದೂ ಬಾಂಧವರು ತಮ್ಮ ಮುಸ್ಲಿಂ ಸಹೋದರರಿಗೆ ಪವಿತ್ರ ರಂಜಾನ್ ಮಾಸದ ಅಂಗವಾಗಿ ಉಪವಾಸಿಗರಿಗೆ ಇಫ್ತಾರ್ ಏರ್ಪಡಿಸಿದ್ದರು.

ಇದರಲ್ಲಿ ಸುಮಾರು 200 ಜನ ಭಾಗವಹಿಸಿದ್ದು, ವಿಶೇಷವೆಂದರೆ ಹಿಂದೂ ಸಹೋದರರೆ ಖುದ್ದಾಗಿ ತಮ್ಮ ಕಯ್ಯಾರೆ ಊಟ ಬಡಿಸಿದರು.

ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಹರಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿ.

Leave a Reply