ಢಾಕಾ: ಕೆಲವು ದಿನಗಳ ಹಿಂದೆ ಒಂದು ವಿಚಿತ್ರ ಸುದ್ದಿ ನೀಡಿದ್ದೆವು. ಬಾಂಗ್ಲಾದೇಶದ ಯುವಕನ ದೇಹದಲ್ಲಿ ಮೈತುಂಬಾ ತೊಗಟೆ ಬೆಳೆದು ಆ ಬಳಿಕ ಶಸ್ತ್ರಚಿಕಿತ್ಸೆ ನಡೆದು ಅವರು ಗುಣಮುಖ ಆದರು ಎಂದು.

ಆದರೆ ಬರೋಬ್ಬರಿ 25 ಬಾರಿ ಶಸ್ತ್ರಚಿಕಿತ್ಸೆಯ ನಂತರವೂ ಆ ವ್ಯಕ್ತಿಯ ಕೈಯಲ್ಲಿ ಮತ್ತೆ ತೊಗಟೆ ಬೆಳೆಯುವುದು ನಿಂತಿಲ್ಲ. ಪುನಃ ಅದು ಬೆಳೆದ ದೌರ್ಭಾಗ್ಯಕರ ಘಟನೆ ವರದಿಯಾಗಿದೆ.

ವಿಚಿತ್ರ ರೋಗದಿಂದ ಬಳಲುತ್ತಿರುವ ರಿಕ್ಷಾ ಚಾಲಕ ಅಬ್ದುಲ್ ಬಜಂದರ್ ರವರ ಈಗಿನ ಪರಿಸ್ಥಿತಿ ಇನ್ನೂ ಕ್ಲಿಷ್ಟಕರವಾಗಿದೆ. ಈ ಬಾರಿ ವೈದ್ಯರಿಗೇ ಸವಾಲಾಗಿದೆ.

Leave a Reply