ಜೈಪುರ: ಪದ್ಮಾವತ್ ಸಿನೆಮಾ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಸುದ್ದಿ ಮಾಡಿದ ಕರ್ಣಿ ಸೇನೆ ಇದೀಗ ಬಿಜೆಪಿ ಸೋಲಿಗೆ ಸಂಭ್ರಮ ಪಟ್ಟಿದೆ.

ರಾಜಸ್ಥಾನದ ಮೊನ್ನೆ ನಡೆದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸೋಲಾಗಿರುವುದಕ್ಕೆ ಕರ್ಣಿ ಸೇನೆ ಸೇರಿದಂತೆ ಹಲವು ರಜಪೂತ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದೆ.

ಪದ್ಮಾವತ್ ಚಿತ್ರ ನಿಷೇಧಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ರಜಪೂತ ಭವನದ ಮುಂದೆ ಸೇರಿದ್ದ ನೂರಾರು ಕಾರ್ಯಕರ್ತರು ಬಿಜೆಪಿ ಸೋಲನ್ನು ಸಂಭ್ರಮಿಸಿದರು.

Leave a Reply