“ಪದ್ಮಾವತ್ ಸಿನೆಮಾ ಬಿಡುಗಡೆಯ ವಿರುದ್ಧ ಪ್ರತಿಭಟನೆ ನಡೆಸಿತ್ತಿರುವ ನನ್ನ ಕರ್ಣಿ ಸೇನಾ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿಲ್ಲ” ಎಂದು ರಜಪೂತ್ ಸಮುದಾಯದ ಕರ್ಣಿ ಸೇನಾ ಸ್ಥಾಪಕ ಲೋಕೇಂದ್ರ್ ಸಿಂಗ್ ಕಲ್ವೀ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುನ್ನ ಮುಂಬೈ ಮೂಲದ ಕರ್ಣಿ ಸೇನಾ ನಾಯಕ ಯೋಗೇಂದ್ರ ಸಿಂಗ್ ಪದ್ಮಾವತ್ ವಿರುದ್ಧ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿದ್ದರು. ಈ ಕುರಿತು ಕೋಪಗೊಂಡ ಕಲ್ವೀಯವರು ” ಕೆಲವು ನಕಲಿ ಕರ್ಣಿ ಸೇನಾ ಗುಂಪುಗಳು ಪ್ರತಿಭಟನೆಯ ದಿಕ್ಕನ್ನು ತಿರುಗಿಸಲು ಪ್ರಯತ್ನಿಸುತ್ತಿವೆ ಸುಳ್ಳು ಸುದ್ದಿಗಳನ್ನು ಬಿತ್ತರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.” ಎಂದು ಹರಿಹಾಯ್ದರು.

ಸಂಜಯ್ ಲೀಲಾ ಬನ್ಸಾಲಿಯವರಿಂದ ನಿರ್ಮಿತ ಗೊಂಡ ಪದ್ಮಾವತ್ ಚಲನಚಿತ್ರದ ಬಿಡುಗಡೆಯ ವಿರುದ್ಧ ಗುಜರಾತ್ ರಾಜಸ್ಥಾನ್ ಹರ್ಯಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ರಜಪೂತ ಸಮುದಾಯ ಕರ್ಣಿ ಸೇನಾ ಸಂಘವು ಸಿನೆಮಾ ಬಿಡುಗಡೆಯ ವಿರುದ್ಧ ತೀವ್ರ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡ ಸಂಘಟನೆಯಾಗಿ ಗುರುತಿಸಿಕೊಂಡಿದೆ.

Leave a Reply