ಮಕ್ಕಳು ಯಾವ ರೀತಿ ಹಟ ಹಿಡಿಯುತ್ತಾರೆಂದರೆ ಕೊನೆಗೆ ಹೆತ್ತವರು ಅವರ ಆಸೆಗಳನ್ನು ಪೂರೈಸಲು ಹರಸಾಹಸ ಪ್ರದರ್ಶಿಸಲೇ ಬೇಕಾಗುತ್ತದೆ.

ಅದೇ ರೀತಿಯ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬಾಲಕ ಆಧಿ ಮಂಚದ ಮೇಲೆ ಮಲಗಿ ಮುಖ ಮುಚ್ಚಿಕೊಂಡು ಅಳುತ್ತಾ ತನಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರನ್ನು ಭೇಟಿಯಾಗಲೇ ಬೇಕು ಎಂದು ಹಟ ಹಿಡಿಯುತ್ತಾನೆ.

ಕಣ್ಣೂರಿಗೆ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರನ್ನು ಭೇಟಿಯಾಗುವಿಯಂತೆ ಎಂದು ಸಮಾಧಾನಿಸಿದರೂ ಕೇಳದ ಬಾಲಕ ನೀವು ಯಾವಾಗಲೂ ಹೀಗೆ ಹೇಳುತ್ತೀರಾ ಎಂದು ಹೇಳುವ ವಿಡಿಯೋ ತುಣುಕನ್ನು ಫೇಸ್ಬುಕ್ ನಲ್ಲಿ ಆಧಿಯ ತಾಯಿ ಹಂಚಿಕೊಂಡಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಿಎಂ ಪಿಣರಾಯಿ ವಿಜಯನ್ ರವರು ಬಾಲಕನಿಗೆ ತನ್ನನ್ನು ಭೇಟಿಯಾಗುವ ಅವಕಾಶವನ್ನು ಕಲ್ಪಿಸುವುದಾಗಿ ಫೋನ್ ಮಾಡಿ ತಿಳಿಸುತ್ತಾರೆ.

ಕೊನೆಗೂ ಆಧಿ ಸಿಎಂ ಪಿಣರಾಯಿ ವಿಜಯನ್ ರವರನ್ನು ಭೇಟಿಯಾಗಿ ಅವರ ಬಳಿ ಕುಳಿತು ಸಂಭಾಷಣೆ ನಡೆಸುತ್ತಿರುವ ಫೋಟೋವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಣ್ಣೂರಿನ ಸಿಪಿಐ(ಎಮ್ ) ಜಿಲ್ಲಾ ಕಾರ್ಯದರ್ಶಿಯಾದ ಜಯರಾಜನ್ ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ಆಧಿ ಸಿಎಮ್ ಪಿಣರಾಯಿ ವಿಜಯನ್ ರವರನ್ನು ಭೇಟಿಯಾಗಿದ್ದಾನೆ.

Leave a Reply