ಕೊಚ್ಚಿ : ಎನ್ನುಂ ನಿಂಡೆ ಮೊಇದೀನ್ ಸಿನೆಮಾ ಖ್ಯಾತಿಯ ಮಲಯಾಳಂ ನಟ, ನಿರ್ಮಾಪಕ, ನಿರ್ದೇಶಕ ಪೃಥ್ವಿರಾಜ್ ಸಕುಮಾರನ್ ಕುಟುಂಬವು ಕೊಚ್ಚಿಯಲ್ಲಿ ಎಲ್ಲಾ ಸೌಕರ್ಯಗಳೊಂದಿಗೆ ಬದುಕುತ್ತಿದ್ದಾರೆ. ಆದರೆ ಕೇರಳದ ಪ್ರವಾಹ ಯಾರನ್ನೂ ಬಿಡುವ ಲಕ್ಷಣ ಗೋಚರಿಸುತ್ತಿಲ್ಲ. ಆಗಸ್ಟ್ 8 ರಿಂದಲೂ, ಕೇರಳದ ಅನೇಕ ಭಾಗಗಳು ಪ್ರವಾಹದಿಂದ ಪೀಡಿತವಾಗಿದ್ದ್ದು, ಉಂಟಾದ ಭಾರಿ ಮಳೆ ಈ ನೈಸರ್ಗಿಕ ದುರಂತದ ಕಾರಣದಿಂದಾಗಿ ಈಗಾಗಲೇ 75 ಜನರು ಮೃತಪಟ್ಟಿದ್ದಾರೆ. ನೀರಿನ ಮಟ್ಟಗಳು ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಮನೆಗಳು ಮುಳುಗಿವೆ.

ಪೃಥ್ವಿರಾಜ್ ಅವರ ಮನೆ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿದೆ. ಮಾಜಿ ಮಲ್ಲಿಕಾ ಸಕುಮಾರನ್ ಅವರನ್ನು ಕೊಚ್ಚಿಯತಮ್ಮ ಮನೆಯಿಂದ ತೊಟ್ಟಿಯಲ್ಲಿ ಕುಳ್ಳಿರಿಸಿ ಪಾರು ಮಾಡುವ ಫೋಟೋ ವೈರಲ್ ಆಗಿದೆ. ಅವರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ.

ಈ ಹಿಂದೆ ಕೋಟಿಗಟ್ಟಲೆ ಬೆಲೆಬಾಳುವ ಕಾರೊಂದನ್ನು ಅವರ ಕುಟುಂಬ ಖರೀದಿಸಿದ್ದು ರಸ್ತೆ ಸರಿ ಇಲ್ಲದ ಕಾರಾಣ ಮಗನಿಗೆ ವಾಹನ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ಅವರ ಹೇಳಿಕೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದರೆ ಇದೀಗ ವಿಧಿಯ ಚಿತ್ರಣ ನೋಡಿ…

 

Leave a Reply