ಒಂದು ರೂಪಾಯಿಗಾಗಿ ವ್ಯಕ್ತಿಯ ಕೊಲೆ ನಡೆದ ಅಮಾನವೀಯ ಘಟನೆ ಮಹಾರಾಷ್ಟ್ರದ ಕಲ್ಯಾಣದಲ್ಲಿ ನಡೆದಿದೆ.

ಹತ್ತಿರದ ಅಂಗಡಿಗೆಮೊಟ್ಟೆ ಖರೀದಿಸಲು ಹೋದ ಮನೋಹರ ಗಾಮ್ನೆ ಒಂದು ರೂಪಾಯಿ ಕಡಿಮೆ ನೀಡಿದ್ದು, ಈ ಬಗ್ಗೆ ಅಂಗಡಿಯವನೊಂದಿಗೆ ಮಾತಿನ ಚಕಮಕಿ ನಡೆದು ಜಗಳ ವಿಕೋಕ್ಕೆ ತಿರುಗಿದೆ.

ಅಂಗಡಿಯವ ಹಲ್ಲೆ ಮಾಡಿದ ಪರಿಣಾಮವಾಗಿ ಅವರು ಪ್ರಾಣ ಬಿಟ್ಟಿದ್ದಾರೆ. ಆರೋಪಿ ಸುಧಾಕರ್ ಪ್ರಭು (45) ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಸಣ್ಣ ಪುಟ್ಟ ವಿಷಯಕ್ಕೆ ಜಗಳ ಆಗಿ ಕೊಲೆಗೆ ತಲಪಿದರೆ ಹೇಗೆ?

Leave a Reply