ಭೋಪಾಲ್: ಚಲಿಸುತ್ತಿದ್ದ ರೈಲಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಯುವಕನೊಬ್ಬನನ್ನು ವಿನಾಕಾರಣ ತಳ್ಳಿ ಕೊಂದ ಆಘಾತಕಾರಿ ಘಟನೆ ಸುಖಿ ಸೆವಾನಿಯಾ ಪ್ರದೇಶದಲ್ಲಿ ಕಾಮಯಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಘಟನೆ ನಡೆದಿದೆ. ಮೃತ ದುರ್ದೈವಿ ರಿತೇಶ್ 23 ಎಂದು ಗುರುತಿಸಲಾಗಿದೆ

ರಜ್ಜು ಹಾಗೂ ರಿತೇಶ್ ಎಂಬಿಬ್ಬರು ಅಲಹಾಬಾದ್‌ನಿಂದ ಭೋಪಾಲ್‌ಗೆ ಮದುವೆ ಸಮಾರಂಭಕ್ಕೆಂದು ಹೊರಟ್ಟಿದ್ದು, ರೈಲಿನಲ್ಲಿ ರಿತೇಶ್ ಬಾಗಿಲ ಬಳಿ ಕೂತಿದ್ದ ವೇಳೆ ಬಳಿ ಬಂದ ಪಾಲ್ ಎನ್ನುವಾತ ಹೊರಗೆ ತಳ್ಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Image result for CRIME

ರಿತೇಶ್ ಜೊತೆಗಿದ್ದ ರಜ್ಜು ಈ ವೇಳೆ ಶೌಚಾಯಕ್ಕೆ ತೆರಳಿದ್ದು, ಮರಳಿ ಬಂದು ಕಣ್ಣು ಬಿಡುವ ಹೊತ್ತಿಗೆ ರಿತೇಶ್ ನನ್ನ ಪಾಲ್ ತಳ್ಳಿ ಆಗಿತ್ತು ಎಂದು ತಿಳಿದುಬಂದಿದೆ. ಆದಾಗ್ಯೂ ರಿತೇಶ್‌ನನ್ನು ಕೊಲ್ಲುವ ಮುನ್ನ ಆತನ ಬಳಿ “ನಾನು ಸಾಯುತ್ತಿದ್ದೇನೆ ಜೊತೆಗೆ ನಿನ್ನನ್ನು ಕೊಲ್ಲುತ್ತೇನೆ” ಎಂದು ಈ ಕೃತ್ಯ ಎಸಗುತ್ತೇನೆ ಎಂದು ರಜ್ಜು ಮಾಹಿತಿಯನ್ನು ಆಧಾರಿಸಿ ಪೊಲೀಸರು ತಿಳಿಸಿದ್ದಾರೆ.

ರಿತೇಶ್ ಹಾಗೂ ಪಾಲ್ ಅಪರಿಚಿತರು ಇವರ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಇವರಿಬ್ಬರು ಅಲಹಾಬಾದ್‌ನಿಂದಲೇ ಬಂದಿದ್ದರು. ರಿತೇಶ್ ಮದುವೆಗೆಂದು ಹೊರಟ್ಟಿದ್ದ, ಆದರೆ ಆತನಿಗೆ ಏನು ಸಮಸ್ಯೆ ಇತ್ತೆಂದು ತಿಳಿದಿಲ್ಲ. ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವ ವೇಳೆ ಈ ಕೃತ್ಯ ನಡೆಸಿದ್ದಾನೆ ಎಂದು ಸುಖಿ ಸೆವಾನಿಯಾ ಪೊಲೀಸ್‌ ಠಾಣಾಧಿಕಾರಿ ಹೇಮಂತ್‌ ಶ್ರೀವಾಸ್ತವ್‌ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Image result for crime

Leave a Reply