ಅಲಿಗಡ, ಫೆ. 19: ಮೌಲಾನ ಕಲ್ಬೆ ಜವ್ವಾದ್ರು, ಮೌಲಾನ ಸಲ್ಮಾನ್ ನದ್ವಿ ಬಾಬರಿ ಮಸೀದಿಯ ಭೂಮಿಯನ್ನು ರಾಮ ಮಂದಿರಕ್ಕೆ ಬಿಟ್ಟು ಕೊಡಬಹುದೆಂದಿರುವುದು ಅವರ ಏಕ ಪಕ್ಷೀಯ ಅಭಿಪ್ರಾಯವೆಂದು ಹೇಳಿದ್ದಾರೆ.
ಅವರು ಹೇಳಿಕೆ ನೀಡುವಾಗ ಇತರ ಮುಸ್ಲಿಮರೊಂದಿಗೆ ಅವರು ಮಾತುಕತೆ ನಡೆಸಲಿಲ್ಲ. ಆದ್ದರಿಂದ ನದ್ವಿಯ ವಿರುದ್ಧ ಕ್ರಮ ಜರಗಿಸಬೇಕಾಯಿತು ಎಂದು ಕಲ್ಬೆ ಜವ್ವಾದ್ ಹೇಳಿದರು.
ಇಂಕ್ವಿಲಾಬ್ ನ್ಯೂಸ್ ನೆಟ್ವರ್ಕ್ನೊಂದಿಗೆ ಮಾತಾಡಿದ ಅವರು ಮಾತುಕತೆಯ ಬಾಗಿಲು ಮುಚ್ಚಬೇಕೆಂದು ನಾವು ಬಯಸುವುದಿಲ್ಲ.
ಮಾತುಕತೆಯಲ್ಲಿ ಎರಡು ವಿಭಾಗವೂ ಹಿಂದೆ ಸರಿಯಬೇಕಾಗುತ್ತದೆ. ಇನ್ನು ಮೌಲಾನ ನದ್ವಿ ಹಣ ಪಡೆದಿದ್ದಾರೆ ಎನ್ನುವ ಆರೋಪವನ್ನು ವಾಸ್ತವವೆಂದು ಹೇಳಬರುವುದಿಲ್ಲ ಎಂದು ಜವ್ವಾದ್ ಹೇಳಿದರು.