ಕೊಥಗುಂಡಮ್: ನಕ್ಸಲ್ ನಿಗ್ರಹ ಪಡೆ ನಡೆಸಿರುವ ಭಾರೀ ಕಾರ್ಯಾಚರಣೆಯಲ್ಲಿ 12 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ತೆಲಂಗಾಣ ಛತ್ತೀಸ್ಘಡದ ಗಡಿಭಾಗದಲ್ಲಿರುವ ವೆಂಕಟಾಪುರಂ ಮಂಡಲ್ ಎಂಬ ಪ್ರದೇಶದಲ್ಲಿ ಹತ್ಯೆಗಳು ನಡೆದಿರುವುದಾಗಿ ವರದಿಯಾಗಿದೆ.
ಕೂಂಬಿಂಗ್ ವೇಳೆ ನಕ್ಸಲರರು ಹಾಗೂ ನಕ್ಷಲ್ ನಿಗ್ರಹ ಪಡೆಗಳ ಮಧ್ಯೆ ಗುಂಡಿನ ಭಾರೀ ಚಕಮಕಿ ನಡೆದಿದ್ದು, ಪರಿಣಾಮ ಹಿರಿಯ ಮಾವೋವಾದಿ ನಾಯಕ ಹರಿ ಭೂಷಣ್ ಹತ್ಯೆಗೀಡಾಗಿದ್ದಾನೆ ಎಂದು ಶಂಕಿಸಲಾಗಿದೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ ಬಗ್ಗೆ ಸರಿಯಾದ ಮಾಹಿತಿ ಲಭಿಸಿಲ್ಲ ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ. ಮತ್ತು ನಕ್ಸಲರ ಮೃತ ದೇಹಗಳನ್ನು ತೆಲಂಗಾಣದ ಕೊಥಗುಂಡಮ್ ಜಿಲ್ಲೆಯ ಭದ್ರಾಚಲಂನಲ್ಲಿರುವ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.