ನವದೆಹಲಿ: 26 ವರ್ಷದ ಮಹಿಳೆಯ ಮೇಲೆ 16 ವರ್ಷದ ಯುವಕ ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಗುಂಟೂರು ಜಿಲ್ಲೆಯಲ್ಲಿರುವ ಒಪ್ಪಿಚೆರ್ಲಾ ಗ್ರಾಮದಲ್ಲಿ ನಡೆದಿದ್ದು, ಇಬ್ಬರೂ ದಿನಗೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.

ಈ ಅತ್ಯಾಚಾರ ಪ್ರಕರಣವು ದೆಹಲಿಯಾ ನಿರ್ಭಯಾ ಅತ್ಯಾಚಾರಕ್ಕೆ ಹೋಲುತ್ತಿದ್ದು, ಆರೋಪಿ ಹುಡುಗ ಮಹಿಳೆಗೆ ಕೋಲಿನಿಂದ ತಲೆಗೆ ಹಲ್ಲೆ ಮಾಡಿ, ನಂತರ ಆಕೆಯನ್ನು ಹಾಸಿಗೆಯಲ್ಲಿ ಕಟ್ಟಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಮಾತ್ರವಲ್ಲ, ಮಹಿಳೆಯ ಗುಪ್ತಾಂಗಕ್ಕೆ ಕೋಲು ತೂರಿಸಿ ರಕ್ತಸಿಕ್ತಗೊಳಿಸಿದ್ದಾನೆ. ನಂತರ ಬೆಳಗ್ಗೆ 4:30 ರ ಹೊತ್ತಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ವಿವಾಹಿತೆಯಾಗಿದ್ದು, ಪತಿ ತೊರೆದ ಬಳಿಕ ಏಕಾಂಗಿಯಾಗಿ ವಾಸಿಸುತ್ತಿದ್ದಳು.

ರಕ್ತಸ್ರಾವದಿಂದ ಅಶಕ್ತಳಾಗಿ ಬಿದ್ದಿದ್ದ ಮಹಿಳೆಯನ್ನು ನೆರೆಹೊರೆಯವರು ಗುರುಜಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಕೃತ ಕಾಮಿ ಹುಡುಗನ ಬೇಟೆಗೆ ಬಲೆ ಬೀಸಿದ್ದು ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಸಬ್ ಇನ್ಸ್ಪೆಕ್ಟರ್ ಮುರಳಿ ಹೇಳಿದ್ದಾರೆ.

Leave a Reply