ಲಕ್ನೋ: ಪಾಸ್‍ಪೋರ್ಟ್ ನವೀಕರಿಸಬೇಕಾದರೆ ಮತಾಂತರವಾಗಬೇಕೆಂದು ಪಾಸ್‍ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬ ತಗಾದೆ ತಗೆದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಜರಗಿದೆ. ಪಾಸ್ ಪೋರ್ಟ್ ನವೀಕರಿಸಲು ತೆರಳಿದ ಮುಹಮ್ಮದ್ ಅನಸ್ ಮತ್ತು ತನ್ವೀ ಸೇಟ್ ಎಂಬ ಮಿಶ್ರ ಜಾತಿ ದಂಪತಿಗಳಿಗೆ ಈ ದುರನುಭವ ಎದುರಾಗಿದೆ. ನವೀಕರಿಸ ಬೇಖಾದರೆ ಹಿಂದೂ ಧರ್ಮ ಸ್ವೀಕರಿಸಬೇಕೆಂದು ಪಾಸ್ ಪೋರ್ಟ್ ಕಛೇರಿಯ ನೌಕರ ವಿಕಾಸ್ ಮಿಶ್ರ ಹೇಳಿದ್ದ.
ಕಳೆದ ಜೂನ್ ಹತ್ತರಂದು ಪಾಸ್ ಪೋರ್ಟ್ ನವೀಕರಿಸಲು ಅನಸ್ ಮತ್ತು ತನ್ವಿ ಅರ್ಜಿ ಸಲ್ಲಿಸಿದ್ದರು. ಇದರ ಪ್ರಕಾರ ಪಾಸ್‍ಪೋರ್ಟ್ ಕಚೇರಿಗೆ ತೆರಳಬೇಕಾಗಿತ್ತು. ಆದರೆ ಹಿಂದೂ ಧರ್ಮದ ಪ್ರಕಾರ ವಿವಾಹವಾದರೆ ಮಾತ್ರ ಅನಸ್‍ನ ಪಾಸ್ ಪೋರ್ಟ್ ನವೀಕರಿಸಲಾಗುವುದು ಎಂದು ನೌಕರ ಹೇಳಿದನು. ಇದಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ರಿಗೆ ಟ್ವೀಟರ್ ಮೂಲಕ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.

ಆದರೆ ಆತನ ಅಗೌರವತನದ ವರ್ತನೆಗಾಗಿ ನೌಕರನನ್ನು ವರ್ಗಾವಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

Leave a Reply