ಚೆನ್ನೈ: ಪೆರಿಯಾರ್ ಪ್ರತಿಮೆಗಳನ್ನು ದ್ವಂಸ ಮಾಡಿದ್ದರ ವಿರುದ್ದ ರಜನೀಕಾಂತ್ ದನಿಯೆತ್ತಿದ್ದಾರೆ. ಘಟನೆ ನಡೆದು ಎರಡು ದಿನಗಳ ಬಳಿಕ ಪ್ರತಿಕ್ರಿಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಇದು ಕ್ರೂರ ಮನೋಭಾವವನ್ನು ಬಿಂಬಿಸುತ್ತಿದೆ ಎಂದರು. ತನ್ನ ರಾಜಕೀಯ ಪ್ರವೇಶದ ಪ್ರಕಟಣೆಯ ಬಳಿಕ ಮೊದಲ ಬಾರಿಗೆ ಮೊದಲ ಬಾರಿಗೆ ಕೃತ್ಯದ ವಿರುದ್ದ ತಿವ್ರ ವಿಮರ್ಶೆ ನಡೆಸಿದ್ದಾರೆ.

ರಜನೀಕಾಂತ್ ಬಿ.ಜೆ.ಪಿ ಸಖ್ಯ ಬೆಳೆಸಲಿದ್ದಾರೆಂಬ ಗುಲ್ಲು ಹಬ್ಬಿರುವಾಗ ಈ ಸುದ್ದಿ ಹೆಚ್ಚು ಮಹತ್ವ ಪಡೆದಿದೆ. ಪ್ರತಿಮೆ ದ್ವಂಸಕ್ಕೆ ಆಹ್ವಾನವಿತ್ತ ಬಿ.ಜೆ.ಪಿಯ ಕಾರ್ಯದರ್ಶಿ ಎಚ್ ರಾಜಾ ವಿರುದ್ದ ನಟ ಸತ್ಯರಾಜ್ ಮತ್ತು ನಟಿ ಖುಶ್ಬೂ ಕೂಡಾ ರಂಗಕ್ಕಿಳಿದಿದ್ದಾರೆ. ಪೆರಿಯಾರ್ ನಮ್ಮ ಹೃದಯದಲ್ಲಿದ್ದಾರೆ. ಅದನ್ನು ನಿಮ್ಮಿಂದ ಕಿತ್ತುಕೊಳ್ಳಲು ಸಾದ್ಯವಿಲ್ಲ.

ಸಮಯ ನಿಗದಿ ಪಡಿಸಿದರೆ ಪೆರಿಯಾರ್ ಅನುಯಾಯಿಗಳು ನಿಮ್ಮನ್ನು ಎದುರಿಸಲು ಸಿದ್ದ ಎಂದು ಸತ್ಯರಾಜ್ ಹೇಳಿದರು. ಈ ಹೊಲಸು ರಾಜಾ ನನ್ನು ಉಚ್ಚಾಟಿಸಲು ಬಿ.ಜೆ.ಪಿ ಗೆ ತಾಕತ್ತು ಇದೆಯಾ ಎಂದು ನಟಿ ಕಾಂಗ್ರೆಸ್ ವಕ್ತಾರೆ ಖುಶ್ಬೂ ಪ್ರತಿಕ್ರಿಯಿಸಿದ್ದಾರೆ.

Leave a Reply