ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಗೋ ಮಾಂಸ ತಿನ್ನುತ್ತೇನೆ ಎಂದಿದ್ದರು, ಈ ರೀತಿ‌ ಹೇಳಿಕೆ ಕೊಡುವ ಬದಲು ತನ್ನ ತಾಯಿಯ ಮಾಂಸವನ್ನು ತಿನ್ನಲಿ, ಟಿಪ್ಪು ಸುಲ್ತಾನ್ ಓರ್ವ ಕಚಾಡ ವ್ಯಕ್ತಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ಟ ಕಿಡಿಕಾರಿದ್ದಾರೆ.

ಬೆಂಗಳೂರಿನ ಧರ್ಮ ಸಂರಕ್ಷಣಾ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತಾಡಿದ ಅವರು, ಗೋ ಹತ್ಯೆ ವಿಚಾರ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ‘ತಾನು ಗೋ ಮಾಂಸ ತಿನ್ನುವೆ ಎಂದಿದ್ದರು, ಇದಕ್ಕಿಂತ ಅವರ ತಾಯಿಯ ಮಾಂಸವನ್ನೆ ತಿನ್ನಲಿ’ ಎಂದಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರು ತಾನು ಹಿಂದುವಾಗಿಯೇ ಇದ್ದೇನೆ ಎಂದಿದ್ದಾರೆ, ನೀವು ಹಿಂದೂವಾಗಿಯೇ ಇರಿ. ಆದರೆ ಮೃದು ಹಿಂದುತ್ವದ ಧೋರಣೆ ಯಾಕೆ? ಇತ್ತೀಚೆಗೆ ರಾಹುಲ್ ಗಾಂಧಿ ಕೂಡಾ ತಾನು ಹಿಂದು ಎನ್ನುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗಿ ನಾಮ ಹಾಕುತ್ತಿದ್ದಾರೆ. ಅವರ ತಾಯಿಯನ್ನು ಕೇಳಿದರೆ ಅವರು ಯಾರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ದೇವಸ್ಥಾನಕ್ಕೆ ಹೋಗಿ ನಾಮ ಹಾಕಿದಂತೆ ದೇಶದ ಜನರಿಗೂ ನಾಮ ಹಾಕುತ್ತಾರೆ‌, ಇದರ ಬಗ್ಗೆ ನಾವು ಎಚ್ಚರವಹಿಸಬೇಕು ಎಂದು ಹೇಳಿದರು.

ಸರಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುತ್ತಿದೆ ಅದು ಕೇವಲ ಹಿಂದೂಗಳಿಗೆ ಮಾತ್ರವೇ, ಒಂದು ಚರ್ಮವನ್ನೇ ತುಂಡು ಮಾಡಲಾಗುತ್ತದೆ. ಈ ಬಗ್ಗೆ ಯಾಕೆ ಯಾರು ಮಾತಾಡುತ್ತಿಲ್ಲ. ಟಿಪ್ಪು ಸುಲ್ತಾನ್ ಓರ್ವ ಕಚಾಡ, ಶಿವಾಜಿ ಇರುತ್ತಿಲ್ಲ ಎಂದಾಗಿದ್ದರೆ ನಾವೆಲ್ಲರೂ ಸುನ್ನತ್ ಮಾಡಬೇಕಿತ್ತು, ನಮ್ಮ ತಾಯಂದಿರು, ಸಹೋದರಿಯರು ಬುರ್ಖಾ ಹಾಕಬೇಕಿತ್ತು ಎಂದು ಅವರು ಹೇಳಿಕೆಯನ್ನು ಕೊಟ್ಟಿದ್ದಾರೆ.

Leave a Reply